ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ ಮುಂದುವರಿದಿದ್ದು, ಸಂಸ್ಥೆಗೆ ಒಂದೇ ವಾರದಲ್ಲಿ ಅಂದಾಜು 3 ಕೋಟಿ ರೂಪಾಯಿ ನಷ್ಟವಾಗಿದೆ.
READ | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ
ಶಿವಮೊಗ್ಗ ವಿಭಾಗದಿಂದ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಮಂಗಳೂರಿಗೆ ಪ್ರಯಾಣಿಸಬೇಕಾದ ಬಸ್ ಸೌಲಭ್ಯವನ್ನು ಮುಷ್ಕರ ಹಿನ್ನೆಲೆ ನಿಲ್ಲಿಸಿದ್ದು, ಸಾರಿಗೆ ಸಂಸ್ಥೆಗೆ ಭಾರಿ ನಷ್ಟವಾಗಿದೆ.
ನಿತ್ಯ ಶಿವಮೊಗ್ಗ ವಿಭಾಗÀದಿಂದ 200ಕ್ಕೂ ಅಧಿಕ ಬಸ್ ಸಂಚರಿಸುತ್ತವೆ. ಆದರೆ, ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಈಗ 15-20 ಬಸ್ ಮಾತ್ರ ಸಂಚರಿಸುತ್ತಿವೆ. ಇದು ನೇರವಾಗಿ ಸಂಸ್ಥೆಯ ಆದಾಯದ ಮೇಲೆ ಪರಿಣಾಮ ಬೀರಿದೆ.
ಯುಗಾದಿ ಸೀಸನ್ ನಲ್ಲಿ ನಷ್ಟ | ಯುಗಾದಿ ಹಬ್ಬಕ್ಕೆ ತಮ್ಮ ಮನೆಗಳಿಗೆ ಬರಲು ಸಾರಿಗೆ ಸಂಸ್ಥೆಯ ಬಸ್ ಗಳ ಮೇಲೆಯೇ ಆತುಕೊಳ್ಳುವ ಪ್ರಯಾಣಿಕರಿಗೆ ಈ ಸಲ ಬಸ್ ಇಲ್ಲದ್ದರಿಂದ ರೈಲು ಮತ್ತು ಖಾಸಗಿ ಬಸ್ ಅವಲಂಬಿಸಿದ್ದಾರೆ. ಬರೀ ಎರಡು ದಿನಕ್ಕೆ ಅಂದಾಜು 10 ಲಕ್ಷ ರೂಪಾಯಿ ಆದಾಯ ಖೋತಾ ಆಗಿದೆ. ಇದರೊಂದಿಗೆ ಖಾಸಗಿ ಬಸ್ ನವರಿಗೆ ಅನುಕೂಲವಾಗಿದೆ.
https://www.suddikanaja.com/2021/03/05/fire-accident-in-sorab/