ಸುದ್ದಿ ಕಣಜ.ಕಾಂ
ಭದ್ರಾವತಿ: ನಗರ ಸಭೆ ಚುನಾವಣಾ ಅಖಾಡದಲ್ಲಿ ಕೊನೆಯದಾಗಿ ಯಾರು ಇರಲಿದ್ದಾರೆ ಎಂಬುವುದು ಸೋಮವಾರವಷ್ಟೇ ಖಚಿತವಾಗಿದೆ. ಆದರೆ, ಇದೇ ದಿನ ವಾರ್ಡ್ ನಂಬರ್ 29ರ ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟಿದ್ದಾರೆ.
READ | ನೀವು ವಾಟ್ಸಾಪ್ ಬಳಕೆದಾರರೆ, ಹಾಗಾದರೆ ಇದನ್ನು ಒಮ್ಮೆ ಓದಲೇಬೇಕು
ವಾರ್ಡ್ 29 (ರಾಜಪ್ಪ ಲೇಔಟ್- ಹೊಸ ಸಿದ್ದಾಪುರ) ಅಭ್ಯರ್ಥಿ ಶ್ರುತಿ ಮಂಜುನಾಥ್ (32) ಮೃತಪಟ್ಟಿದ್ದಾರೆ. ಮಹಿಳಾ ಸಾಮಾನ್ಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಇವರು ಸೋಮವಾರ ಬೆಳಗ್ಗೆಯೂ ಮತ ಪ್ರಚಾರ ಮಾಡಿದ್ದಾರೆ. ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಹೆಚ್ಚುವರಿ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಸೇರಿದಂತೆ ಪಕ್ಷದ ಮುಖಂಡರು ಸಂತಾಪ ಸೂಚಿಸಿದ್ದಾರೆ.
ಚುನಾವಣೆ ನಡೆಯುವುದು ಡೌಟ್ | ವಾರ್ಡ್ ನಂ.29ರ ಅಭ್ಯರ್ಥಿ ಅಕಾಲಿಕ ಮರಣ ಹೊಂದಿರುವುದರಿಂದ ಬಹುತೇಕ ಇದೊಂದು ವಾರ್ಡ್ ಚುನಾವಣೆ ನಡೆಯುವುದು ಅನುಮಾನ. ಕಾರಣ, ಚುನಾವಣಾ ಆಯೋಗದ ನಿಯಮದ ಪ್ರಕಾರ, ಮತದಾನಕ್ಕೂ ಮುನ್ನ ಇಂತಹ ಘಟನೆ ನಡೆದರೆ ಆಯೋಗದಿಂದ ಮತ್ತೊಂದು ಆದೇಶ ಹೊರಡಿಸಿ ಪ್ರತ್ಯೇಕವಾಗಿ ಚುನಾವಣೆ ಮಾಡಲಾಗುತ್ತದೆ. ಈಗಾಗಲೇ ಈ ಸಂಬಂಧ ಚುನಾವಣಾ ಆಯೋಗಕ್ಕೆ ವರದಿ ಸಹ ಕಳುಹಿಸಲಾಗಿದೆ. ಅಲ್ಲಿಂದ ಪ್ರತಿಕ್ರಿಯೆ ಬಂದ ನಂತರ ಹೊಸ ದಿನಾಂಕದಂದು ಇದೊಂದು ವಾರ್ಡ್ ಗೆ ಬೇರೆಯ ದಿನಾಂಕದಂದು ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
https://www.suddikanaja.com/2021/04/05/fraud-in-police-exam/