ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಶ್ವ ಪುಸ್ತಕ ದಿನದಂದೇ ಸಾರ್ವಜನಿಕ ಗ್ರಂಥಾಲಯಗಳ ಕೆಲವು ಸೇವೆಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಕತ್ತರಿ ಹಾಕಿದೆ.
READ | ಹೇಗಿರಲಿದೆ ವೀಕೆಂಡ್ ಕರ್ಫ್ಯೂ, ಏನಿರುತ್ತೆ, ಏನಿರಲ್ಲ? ಗೊಂದಲ ಬೇಡ, ಇದನ್ನು ಓದಿ
ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ, ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟಲು ಮೇ 4ರ ವರೆಗೆ ಗ್ರಂಥಾಲಯ ಸೇವೆಗಳಾದ ದಿನಪತ್ರಿಕೆ ಹಾಗೂ ನಿಯತಕಾಲಿಕೆ, ಗ್ರಂಥಗಳ ಪರಾಮರ್ಶನ ಸೇವೆಗಳನ್ನು ನಿಬರ್ಂಧಿಸಲಾಗಿದೆ.
ಗ್ರಂಥಾಲಯದಲ್ಲಿ ಕೇವಲ ಪುಸ್ತಕಗಳನ್ನು ವಿತರಿಸುವ ಅವಕಾಶ ಮಾತ್ರ ನೀಡಲಾಗಿದೆ. ಹೀಗಾಗಿ, ಸಾರ್ವಜನಿಕರು ಸಹಕರಿಸಬೇಕು ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.