ಸುದ್ದಿ ಕಣಜ.ಕಾಂ
ಭದ್ರಾವತಿ: ಭದ್ರಾವತಿ ನಗರ ಸಭೆ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಮತದಾನ ಆರಂಭವಾಗಿದೆ. ಆದರೆ, ಬೆಳಗ್ಗೆ ಮತಗಟ್ಟೆಗಳ ಕಡೆಗೆ ಬರುವವರ ಸಂಖ್ಯೆ ಕಡಿಮೆ ಇದೆ.
ಭದ್ರಾವತಿಯಲ್ಲಿ ಬೆಳಗ್ಗೆ 10 ಗಂಟೆಯವರೆಗೆ ಕೇವಲ ಶೇ.10ರಷ್ಟು ಮತದಾನವಾಗಿದ್ದು,11 ಗಂಟೆ ಹೊತ್ತಿಗೆ ಶೇ.19 ಮತದಾನವಾಗಿದೆ. ಮತದಾರರಿಂದ ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆ ಇಲ್ಲ.
https://www.suddikanaja.com/2021/04/22/no-thermal-scanning-in-ksrtc-bus-stand/
ಕೋವಿಡ್ ಹಿನ್ನೆಲೆ ಸಾಕಷ್ಟು ಜನ ಹೊರಗಡೆ ಬರುವುದಕ್ಕೆ ಹಿಂದೇಟು ಹಾಕಿದರೆ ಮತ್ತೊಂದೆಡೆ ಇಳಿ ವಯಸ್ಸಿನಲ್ಲೀ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು.
ಕೋವಿಡ್ ಮಾರ್ಗಸೂಚಿಯಂತೆ ಮತಗಟ್ಟೆಯೊಳಗೆ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮೂಲಕ ದೇಹದ ತಾಪಮಾನ ಪರೀಕ್ಷಿಸಲಾಯಿತು. ನಂತರ, ಸ್ಯಾನಿಟೈಸ್ ಮಾಡಿ ಒಳಗೆ ಬಿಡಲಾಯಿತು.
ತೀರ್ಥಹಳ್ಳಿಯಲ್ಲೂ ಬೆಳಗ್ಗೆಯಿಂದ ಮಂದಗತಿ ಮತದಾನ ನಡೆಯುತ್ತಿದೆ. ಆದರೆ, 11 ಗಂಟೆ ಹೊತ್ತಿಗೆ ಶೇ.33ರಷ್ಟು ಮತದಾನವಾಗಿದೆ.
VIDEO REPORT
ಜಿಲ್ಲಾಧಿಕಾರಿ ರೌಂಡ್ಸ್ | ಭದ್ರಾವತಿಯ ಹಲವು ಮತಗಟ್ಟೆಗಳಿಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಭೇಟಿ ಅಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದರು. ಯಾವುದೇ ರೀತಿಯ ಪ್ರಮಾದಗಳಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ ಮಾರ್ಗಸೂಚಿ ಪ್ರಕಾರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮಾಡುವಂತೆ ತಿಳಿಸಿದರು.
https://www.suddikanaja.com/2021/02/20/deputy-commissioner-kb-shivakumar-visited-shikaripura/