ಸುದ್ದಿ ಕಣಜ.ಕಾಂ
ಶಿವಮೊಗ್ಗ: ಯುವ ಕಾಂಗ್ರೆಸ್ ನಿಂದ `ಹಸಿದವರಿಗೆ ಅನ್ನ- ಲಾಕ್ ಡೌನ್ ಮುಗಿಯುವವರೆಗೆ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರ ಭಾಗವಾಗಿ ಬುಧವಾರ ನಗರದ ಹಲವೆಡೆ ಬಡವರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
READ | ಹೇಗಿದೆ ಲಾಕ್ ಡೌನ್ ಮೊದಲ ದಿನ,ಜನ,ವಾಹನ ಸಂಚಾರ ಇದೆಯೇ, ಹೇಗಿದೆ ಪೊಲೀಸ್ ಸೆಕ್ಯೂರಿಟಿ?
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಶಿವಮೊಗ್ಗ ನಗರದ ಹಲವು ಭಾಗಗಳಲ್ಲಿ ಆಹಾರದ ಅವಶ್ಯಕತೆ ಇರುವವರಿಗೆ ಊಟದ ಪ್ಯಾಕೆಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಣೆ ಮಾಡಲಾಯಿತು.
ನಗರದ ಖಾಸಗಿ ಬಸ್ ನಿಲ್ದಾಣ , ಮೆಗ್ಗಾನ್ ಆಸ್ಪತ್ರೆ ಹಾಗೂ ಹಲವು ಖಾಸಗಿ ಆಸ್ಪತ್ರೆಗಳ ಮುಂಭಾಗ ಆಹಾರದ ಅವಶ್ಯಕತೆ ಇರುವ ರೋಗಿಗಳ ಸಂಬಂಧಿಗಳಿಗೆ ಆಹಾರ ವಿತರಿಸಲಾಯಿತು.
ಹಸಿದವರಿಗೆ ಅನ್ನ ಕಾರ್ಯಕ್ರಮವು ಸಂಪೂರ್ಣ ಹದಿನಾಲ್ಕು ದಿನ ಲಾಕ್ ಡೌನ್ ಮುಗಿಯುವವರೆಗೂ ಇರುತ್ತದೆ ಎಂದು ಸಮಿತಿಯು ಪ್ರಮುಖರು ತಿಳಿಸಿದ್ದಾರೆ.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಪ್ರವೀಣ್ ಕುಮಾರ್, ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಎಚ್.ಪಿ.ಗಿರೀಶ್, ಯುವ ಕಾಂಗ್ರೆಸ್ ನ ಬ್ಲಾಕ್ ಅಧ್ಯಕ್ಷರಾದ ಬಿ. ಲೋಕೇಶ್, ಎಸ್.ಕುಮರೇಶ್, ಈ.ಟಿ.ನಿತೀನ್, ಯುವ ಕಾಂಗ್ರೆಸ್ ಮುಖಂಡ ಆರ್.ಕಿರಣ್, ಪದಾಧಿಕಾರಿಗಳಾದ ಗಗನ್, ವೆಂಕಟೇಶ್, ಪ್ರಜ್ವಲ್ ಇತರರು ಇದ್ದರು.
https://www.suddikanaja.com/2020/12/01/man-from-west-bengal-theft-in-goldsmith-shop/