ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರ ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೆ, ಇದೇ ಮೊದಲ ಸಲ ಜಿಲ್ಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ. ಹೀಗಾಗಿ, ಆಯುರ್ವೇದ ಆಸ್ಪತ್ರೆಗೆ ಬಂದವರು ಲಸಿಕೆ ಇಲ್ಲದೇ ವಾಪಸ್ ಮರಳಿದ ಘಟನೆ ಗುರುವಾರ ನಡೆದಿದೆ.
ಕೊರತಗೇನು ಕಾರಣ | ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ. ನಿತ್ಯ 7 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಆದರೆ, ಪೂರೈಕೆಯೇ ಕಡಿಮೆ ಆಗಿರುವುದರಿಂದ ಬಂದಿದ್ದಷ್ಟು ಲಸಿಕೆ ಜನರಿಗೆ ನೀಡಿದ್ದು, ಸ್ಟಾಕ್ ಮುಗಿದಿದೆ.
ಕೋವ್ಯಾಕ್ಸಿನ್ ಗಿಲ್ಲ ಕೊರತೆ | ಕೋವ್ಯಾಕ್ಸಿನ್ ಗೆ ಯಾವುದೇ ಕೊರತೆ ಇಲ್ಲ. ಪ್ರಸ್ತುತ ಜಿಲ್ಲೆಯಲ್ಲಿ 6,500 ಲಸಿಕೆ ಲಭ್ಯವಿದ್ದು, ಇನ್ನಷ್ಟು ಬರುವ ನಿರೀಕ್ಷೆ ಇದೆ. ಇಲ್ಲಿಯವರೆಗೆ ಕೋವಿಶೀಲ್ಡ್ 1.66 ಲಕ್ಷ ಹಾಗೂ ಕೋವ್ಯಾಕ್ಸಿನ್ 16,900 ಜನರಿಗೆ ನೀಡಲಾಗಿದೆ.
https://www.suddikanaja.com/2021/04/09/penalty-for-not-wearing-mask/