ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹನಿಮೂನಿಗೋಸ್ಕರ ಸಕ್ರೆಬೈಲು ಆನೆಬಿಡಾರಕ್ಕೆ ಬಂದಿರುವ ಚಿತ್ರದುರ್ಗ ಮರುಘಾಮಠದ ಹೆಣ್ಣಾನೆಯು ವೈದ್ಯರ ಮೇಲೆ ಭಾನುವಾರ ಹಲ್ಲೆ ಮಾಡಿದೆ.
ವೈದ್ಯರ ಡಾ.ವಿನಯ್ ಅವರು ಆನೆಗೆ ಔಷಧ ನೀಡುವುದಕ್ಕೆಂದು ಕ್ರಾಲ್ ಬಳಿ ಹೋದಾಗ ಶಾಂತವಾಗಿಯೇ ಇದ್ದ 25 ವರ್ಷದ ಕನೇನಿ ಅಲಿಯಾಸ್ ನೀಲಾಂಬರಿ ಎಂಬ ಆನೆಯು ಏಕಾಏಕಿ ವೈದ್ಯರ ಮೇಲೆ ದಾಳಿ ಮಾಡಿದೆ.
READ | ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಇಲ್ಲ, ಸಿದ್ದರಾಮಯ್ಯ ವಿರುದ್ಧ ವಾಕ್ಸಮರ
ವೈದ್ಯರ ಕಾಲಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ತಕ್ಷಣ ಶಿವಮೊಗ್ಗದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ರೇ ಮತ್ತಿತರ ಪರೀಕ್ಷೆಗಳ ನಂತರ ಏನೂ ಆಗಿಲ್ಲ ಎಂಬುದು ತಿಳಿಯುತ್ತಿದ್ದಂತೆ ವಿಶ್ರಾಂತಿ ಪಡೆಯುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ ಎಂದು ಮೂಲಗಳು `ಸುದ್ದಿ ಕಣಜ’ಕ್ಕೆ ತಿಳಿಸಿವೆ.
ಕ್ರಾಲ್ ಬಳಿ ಯಾರೂ ಇರಲಿಲ್ಲ | ಭಾನುವಾರವಾದ್ದರಿಂದ ಎಲ್ಲ ಸಿಬ್ಬಂದಿ ಕ್ಯಾಂಪ್ ಬಳಿ ಇದ್ದರು. ಕ್ರಾಲ್ ಬಳಿ ಯಾರೂ ಇರಲಿಲ್ಲ. ಆ ವೇಳೆ, ಹನಿಮೂನಿಗಾಗಿ ಬಂದಿರುವ ನೀಲಾಂಬರಿ ಹಲ್ಲೆ ನಡೆಸಿದ್ದಾಳೆ.
https://www.suddikanaja.com/2021/01/04/manikanth-elephant-attack-on-two-elephant-at-sakrebailu-elephant-camp/