ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಖ್ನೌನಲ್ಲಿ ನಡೆದ ನೈಜ ಘಟನೆ ಆಧರಿತ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಶಿವಮೊಗ್ಗದ ಮೂವರು ನಟಿಸಿದ್ದು, ಈಗಾಗಲೇ ಸಿನಿ ಆಸಕ್ತರಲ್ಲಿ ಚಿತ್ರದ ಹಾಡು ಮತ್ತು ಟ್ರೇಲರ್ ಭಾರಿ ಸದ್ದು ಮಾಡಿದೆ.
READ | ಕೆ.ಎಸ್.ಆರ್.ಟಿ.ಸಿಗೆ ಕೋಟಿಗಟ್ಟಲೇ ನಷ್ಟ, ಯುಗಾದಿ ಸೀಸನ್ ವೊಂದರಲ್ಲೇ ₹ 10 ಲಕ್ಷ ಖೋತಾ!
ಎಲ್ಲೆಲ್ಲಿ ತೆರೆಗೆ | ನಗರದ ಭಾರತ್ ಸಿನಿಮಾಸ್ ನಲ್ಲಿ 7 ಪ್ರದರ್ಶನ ಹಾಗೂ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ರಂಗಕರ್ಮಿ ವೈದ್ಯ, ರಂಗ ಕಲಾವಿದೆ ವಿಜಯಲಕ್ಷ್ಮಿ, ಚಲನಚಿತ್ರ ಸಂಘಟಕ ರಾಮಣ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ.
READ | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ
ತಾರಾಗಣ | ಅಭಿಷೇಕ ಕಾಸರಗೋಡುರವರ ಛಾಯಾಗ್ರಹಣವಿರುವ ಈ ಚಿತ್ರದ ನಾಯಕಿಯರಾಗಿ ಅಪೂರ್ವ, ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಚಿಕ್ಕಣ್ಣ , ಯಶ್ ಶೆಟ್ಟಿ , ಶಿವಮೊಗ್ಗ ವೈದ್ಯ, ಪ್ರಮೋದ್ ಶೆಟ್ಟಿ, ಶಿವಮೊಗ್ಗ ರಾಮಣ್ಣ, ಶ್ರೀನಿವಾಸ್ ಪ್ರಭು, ವಿಜಯಲಕ್ಷ್ಮಿಮೊದಲಾದವರ ಅಭಿನಯವಿದೆ.