ಸುದ್ದಿ ಕಣಜ.ಕಾಂ
ಹೊಸನಗರ: ಇತ್ತೀಚೆಗೆ ವಿವಾಹವಾಗಿದ್ದ ಯುವತಿಯ ಮೇಲೆ ಭಗ್ನಪ್ರೇಮಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
READ | ಕೊರೊನಾ ಲಸಿಕೆ ಅಭಾವ, ಕೆಲಸ ಬಿಟ್ಟು ಬಂದವರು ವಾಪಸ್, ಸರಿಯಾದ ಮಾಹಿತಿ ಇಲ್ಲದೇ ಜನರ ಪರದಾಟ
ಏಪ್ರಿಲ್ 26ರಂದು ಯುವತಿ ವಿವಾಹವಾಗಿದ್ದು, ಗಂಡನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭಗ್ನ ಪ್ರೇಮಿ ಏಕಾಏಕಿ ಬಂದು ತಬ್ಬಿಕೊಂಡಿದ್ದಾನೆ. ಅವಾಚ್ಯವಾಗಿ ನಿಂದಿಸಿದ್ದಾನೆ. ಪ್ರೀತಿಸುವಂತೆ ಒತ್ತಾಯ ಮಾಡಿ, ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಯುವತಿಯ ಮೈಮೇಲಿದ್ದ ಬಟ್ಟೆಗಳನ್ನು ಹರಿದು ಕೊಲೆ ಬೆದರಿಕೆ ಒಡ್ಡಿದ್ದಾನೆ.
READ | ಹಾಲು, ತರಕಾರಿ, ದಿನಸಿ ಖರೀದಿಯ ಸಮಯ ಬದಲಿಸಿ ಸರ್ಕಾರ ಆದೇಶ
ಭಗ್ನಪ್ರೇಮಿಯ ನಡತೆಯಿಂದ ಭಯಗೊಂಡ ಯುವತಿ ಕಿರುಚಿಕೊಂಡಿದ್ದಾಳೆ. ತಕ್ಷಣ ತೋಟದಲ್ಲಿ ಕೆಲಸ ಮಾಡುತ್ತಿದ್ದ ಪತಿ ಸೇರಿದಂತೆ ಇತರರು ಓಡಿಬಂದಿದ್ದಾರೆ. ಭಗ್ನಪ್ರೇಮಿ ಅಲ್ಲಿಂದ ಓಡಿಹೋಗಿದ್ದಾನೆ. ಈ ಬಗ್ಗೆ ವಿಚಾರಿಸಿದಾಗ ಮದುವೆಗೂ ಮುನ್ನವೂ ಇದೇ ರೀತಿ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದು, ರಕ್ಷಣೆ ನೀಡುವಂತೆ ಕೋರಿದ್ದಾಳೆ. ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2020/11/13/young-woman-slipped-into-the-tunga-river-by-a-moving-janshatabdi-train/