ಸುದ್ದಿ ಕಣಜ.ಕಾಂ
ಚಿತ್ರದುರ್ಗ: ಜಿಲ್ಲೆ ಹಿರಿಯೂರು ತಾಲ್ಲೂಕು ಹೊಸ ಯಳನಾಡು ಗ್ರಾಮದ ಯುವಕನೊಬ್ಬ ‘ಹನುಮಾಜನ್ಮಭೂಮಿ ಇಂದ ರಾಮ ಜನ್ಮಭೂಮಿಗೆ’ ಎಂಬ ಘೋಷ ವಾಕ್ಯದಡಿ 18 ದಿನಗಳಲ್ಲಿ 2000 ಕಿ.ಮೀ ದೂರವನ್ನು ಸೈಕಲ್ ಯಾತ್ರೆಯ ಮೂಲಕ ಕ್ರಮಿಸಿದ್ದಾರೆ.
https://www.suddikanaja.com/2021/01/12/young-man-dead-in-gajanur-dam-shivamogga/
ಯಳನಾಡು ಬಡಗಿ ದಾಸಪ್ಪನ ಮಗ ಕರಿಯಣ್ಣ (ಯ.ಬ.ದ.ಕ) ಇವರು 2 ಸಾವಿರ ಕಿ.ಮೀ. ಸೈಕಲ್ ಯಾತ್ರೆ ಪೂರ್ಣಗೊಳಿಸಿದ್ದಾರೆ. ಇವರು ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯ.ಬ.ದ.ಕ ಅವರು ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರು ಮತ್ತು ಪ್ರಸ್ತುತ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ
ಚಂಪತ್ ರಾಯ್ ಹಾಗೂ ರಾಮಮಂದಿರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತಿರುವ ಕರ್ನಾಟಕದವರಾದ ಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ.
ಅಯೋಧ್ಯೆಗೆ ಸೈಕಲ್ ಯಾತ್ರೆಯ ಉದ್ದೇಶ |ಕೊರೊನಾ ಮುಕ್ತ ಭಾರತಕ್ಕೆ ನಮ್ಮ ಸಂಕಲ್ಪ, ದೇಶವನ್ನು ಪ್ರಾಮಾಣಿಕ ಮಾಡಲು ಪಣ, ಎಲ್ಲ ಜನರಿಗೂ ಉತ್ತಮ ಆಹಾರ ಪದ್ಧತಿ, ಜೀವಜಲ ಉಳಿವಿಗೆ ಹೋರಾಟ, ಯುವಕರಿಗೆ ರಾಮಭಕ್ತಿಯೇ ಶಕ್ತಿ ಎಂಬ ಅಂಶಗಳ ಸಂಕಲ್ಪದೊಂದಿಗೆ ಯಾತ್ರೆ ಪೂರ್ಣಗೊಳಿಸಿದ್ದಾರೆ.
https://www.suddikanaja.com/2021/04/11/man-dead-due-to-corona/