ಸುದ್ದಿ ಕಣಜ.ಕಾಂ
ಶಿಕಾರಿಪುರ: ಈತ ಯುವ ಕುಸ್ತಿ ಪಟುಗಳಿಗೆ ಸ್ಫೂರ್ತಿ, ಶಿವಮೊಗ್ಗ ದಸರಾ ಕ್ರೀಡಾಕೂಟದ ಕುಸ್ತಿ ಪಂದ್ಯಾವಳಿಯಲ್ಲಿ ಹಲವು ಸಲ ಪದಕಕ್ಕೆ ಕೊರಳೊಡ್ಡಿದವ. ಆದರೆ, ಸೋಮವಾರ ಕೊರೊನಾ ಮಹಾಮಾರಿ ಈ ಯುವ ಕುಸ್ತಿಪಟುವನ್ನೂ ಬಿಡಲಿಲ್ಲ.
https://www.suddikanaja.com/2021/01/12/young-man-dead-in-gajanur-dam-shivamogga/
ಗಟ್ಟಿಮಸ್ತಾದ ಕಾಯ ಹೊಂದಿದ್ದ ಈತ ಬೇರೆ ಯಾರೂ ಅಲ್ಲ ತಾಲೂಕಿನ ಕಡೆಯ ಗ್ರಾಮ ಕಡೇನಂದಿಹಳ್ಳಿಯ ಕುಸ್ತಿ ಪಟು ಶ್ರೀನಿವಾಸ್ (32).
ಗರಡಿಮನೆಯಲ್ಲಿ ಕೋಚ್ | ಶ್ರೀನಿವಾಸ್ ಅವರು ಶಿವಮೊಗ್ಗದ ಗಾಂಧಿ ಬಜಾರಿನಲ್ಲಿರುವ ಗರಡಿಮನೆಯಲ್ಲಿ ಯುವಪೀಳಿಗೆಗೆ ಕೋವಿಂಗ್ ನೀಡುತ್ತಿದ್ದ. ಹೊಳೆ ಹೊನ್ನೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಕುಸ್ತಿ ತರಬೇತಿ ಸಹ ನೀಡುತಿದ್ದ.
ಕುಸ್ತಿ ಅಖಾಡದಲ್ಲಿ ಮಾತ್ರವಲ್ಲದೇ ಶ್ರೀನಿವಾಸ್ ಅವರು ಬೆಳ್ಳಿ ಪರದೆಯ ಮೇಲೆಯೂ ಸದ್ದು ಮಾಡಲಿದ್ದರು. ಇವರು ವಿಲನ್ ಆಗಿ ನಟಿಸಿರುವ ‘ತ್ರಿಬಾಹು’ ಚಲನ ಚಿತ್ರತೆರೆ ಕಾಣುವುದಕ್ಕೂ ಮುನ್ನವೇ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಚಿಕಿತ್ಸೆ ಪಡೆದು ಹಿಂದಿರುಗಿದ್ದರು | ಶ್ರೀನಿವಾಸ್ ಅವರು ಕುಸ್ತಿಯೊಂದಿಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತಿದ್ದರು. ಕೊರೊನಾ ಸೋಂಕು ತಗುಲಿದ್ದೇ ಅವರು ಮೆಗ್ಗಾನ್ ನಲ್ಲಿ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರು. ನಂತರ, ಮನೆಗೆ ವಾಪಸ್ ಹೋಗಿದ್ದ ಶ್ರೀನಿವಾಸ್ ಮನೆಯಲ್ಲಿ ಚಿಕ್ಕ ಮಕ್ಕಳಿದ್ದು,ಅವರ ಆರೋಗ್ಯದ ದೃಷ್ಟಿಯಿಂದ ತಮ್ಮ ಗ್ರಾಮದಲ್ಲಿರುವ ಹೊಲದಲ್ಲಿರುವ ಮನೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿದ್ದರು. ವಿಧಿಯಾಟಕ್ಕೆ ಸೋಮವಾರ ಪ್ರತಿಭಾವಂತ ಕುಸ್ತಿಪಟುವೊಬ್ಬರು ಮೃತಪಟ್ಟಿದ್ದಾರೆ.
https://www.suddikanaja.com/2021/03/01/khelo-india-winter-games-2-golds-won-by-shivamogga-girls/