ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖರಾಗದ ಹಿರತು ಯಾವುದೇ ಕಾರಣಕ್ಕೂ ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ನಿಂದ ಬಿಡುಗಡೆ ಮಾಡಬಾರದು ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಆದೇಶಿಸಿದರು.
https://www.suddikanaja.com/2021/03/20/creating-fraud-certificate-accused-arrested/
ಶಿವಮೊಗ್ಗ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೈಗೊಂಡ ಕ್ರಮಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸೋಂಕಿತರು ಗುಣಮುಖರಾದವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿನಿಂದ ಗುಣಮುಖನಾಗಿದ್ದಾನೆ ಎಂಬ ಸೆರ್ಟಿಫಿಕೆಟ್ ನೀಡಿ ಆತನನ್ನು ಮನೆಗೆ ಕಳುಹಿಸುವ ಕೆಲಸ ಆಗುತ್ತದೆ. ಇಲ್ಲದಿದ್ದರೆ ಐಸೋಲೇಷನ್ ನಲ್ಲಿಯೇ ಇಡಲಾಗುವುದು ಎಂದು ಹೇಳಿದರು.
ಯಾರ ಶಿಫಾರಸಿಗೂ ಬಾಗಬೇಡಿ | ಸೋಂಕಿತರನ್ನು ಸಿಸಿಸಿಯಿಂದ ಬಿಡುಗಡೆ ಮಾಡುವಂತೆ ಯಾರೇ ಶಿಫಾರಸು ಮಾಡಿದರೂ (ನಾನೇ ಫೋನ್ ಮಾಡಿದರೂ) ಬಾಗುವ ಅಗತ್ಯವಿಲ್ಲ. ಅಧಿಕಾರಿಗಳು ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡದೇ ಕೇರ್ ಸೆಂಟರ್ ಗೆ ಸೇರಿಸಿ. ಮೇ 20 ರಿಂದ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿವೆ ಎಂದರು.
ಜಿಪಂ ಸಿಇಒ ಎಂ.ಎಲ್. ವೈಶಾಲಿ, ಇಒ ಕಲ್ಲಪ್ಪ, ಸಿಪಿಐ ಸಂಜೀವ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2021/04/11/man-dead-due-to-corona/