ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಫ್ರಿ ಗ್ರಾಮಗಳಾಗಿ ಮಾಡುವಲ್ಲಿ ಪಿಡಿಒಗಳು ಕಾರ್ಯನ್ಮುಖವಾಗಬೇಕು ಎಂದು ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸೂಚನೆ ನೀಡಿದರು.
ಶಿವಮೊಗ್ಗ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕೈಗೊಂಡ ಕ್ರಮಗಳ ಕುರಿತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ಆಯೋಜಿಸಿದ್ದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ರಾಮಾಂತರ ಭಾಗದಲ್ಲಿ 1,085 ಪಾಸಿಟಿವ್ ಪ್ರಕರಣಗಳಿದ್ದು, 87 ಸಾವಾಗಿರುವುದರಿಂದ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ ಪ್ರಕರಣ ಕಂಡುಬಂದರೆ ರಾಷ್ಟ್ರೀಯ ವಿಪತ್ತು ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಸಿಇಒ ಎಂ.ಎಲ್. ವೈಶಾಲಿ ನಿರ್ದೇಶನ ನೀಡಿದರು.
ಯಾವ ಗ್ರಾಮಗಳು ಯಾವ ಹಾಸ್ಟೆಲ್ ವ್ಯಾಪ್ತಿಗೆ ಬರಲಿವೆ? | ಹಕ್ಕಿಪಿಕ್ಕಿ ಕ್ಯಾಂಪ್ ನ ಹಾಸ್ಟೆಲ್ ವ್ಯಾಪ್ತಿಗೆ ಹಸೂಡಿ, ಶೆಟ್ಟಿಹಳ್ಳಿ, ಬಿ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕೂಡ್ಲಿ, ಪಿಳ್ಳಂಗೆರೆ, ಹೊಳೆಬೆನವಳ್ಳಿ ಗ್ರಾಮಗಳು ಬರಲಿದೆ. ಇಲ್ಲಿ ಕಂಡುಬರುವ ಸೋಂಕಿತರನ್ನು ಇಲ್ಲೇ ಐಸೋಲೇಷನ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕುಂಸಿಯ ವ್ಯಾಪ್ತಿಯಲ್ಲಿ, ಕೋಹಳ್ಳಿ, ಹೊಸಳ್ಳಿ, ಆಯನೂರು, ಉಂಬ್ಳೆಬೈಲು, ಬಾಳೆಕೊಪ್ಪ, ಸೋಗಾನೆ, ಕುಂಸಿ, ಕೊರ್ಲಹಳ್ಳಿ, ಹಾರನಹಳ್ಳಿ, ಮುದ್ದಿನಕೊಪ್ಪ, ಸಿರಿಗೆರೆ, ಕೋಟೆಗಂಗೂರು, ಚೋರಡಿ, ತುಪ್ಪೂರು, ಅಗಸವಳ್ಳಿ, ಪುರದಾಳು ಗ್ರಾಮಗಳು ಬರಲಿವೆ.
ಗೋಂದಿ ಚಟ್ನಹಳ್ಳಿ ವ್ಯಾಪ್ತಿಗೆ ಬೇಡರ ಹೊಸಹಳ್ಳಿ, ಸೂಗೂರು, ಹರಮಘಟ್ಟ, ಕುಂಚೇನಹಳ್ಳಿ, ಕೊಮ್ಮನಾಳು, ರಾಮನಗರ, ಮಲ್ಲಾಪುರ, ಅಬ್ಬಲಗೆರೆ ಗ್ರಾಮಗಳು ಬರಲಿವೆ.
ಸಮುದಾಯ ಆರೋಗ್ಯ ಕೇಂದ್ರಗಳೀಗ ಕೋವಿಡ್ ಕೇರ್ ಸೆಂಟರ್ | ಅತಿ ಶೀಘ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗುವುದೆಂದು ಅಶೋಕ್ ನಾಯ್ಕ್ ತಿಳಿಸಿದರು.
ಹೊಳೆಹೊನ್ನೂರು, ಹೊಳಲೂರು, ಆಯನೂರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಮಾಡಲಾಗುತ್ತಿದೆ ಎಂದರು.
ಇಒ ಕಲ್ಲಪ್ಪ, ಸಿಪಿಐ ಸಂಜೀವ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಕೊರೊನಾ ಕಂಪ್ಲೇಂಟ್ ಗೆ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ, ಮತ್ತೆ ಶುರುವಾಗಲಿ ಕೋವಿಡ್ ಕೇರ್ ಸೆಂಟರ್