ಸುದ್ದಿ ಕಣಜ.ಕಾಂ
ಚಿತ್ರದುರ್ಗ: ರಿಯಲ್ ಸ್ಟಾರ್ ಉಪೇಂದ್ರ ಅವರು ಬರೀ ಸಿನಿಮಾ ಅಷ್ಟೇ ಅಲ್ಲದೇ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.
ಹಿರಿಯೂರಿನ ಬೆಳೆಗಾರರೊಬ್ಬರಿಂದ 10 ರೂಪಾಯಿಗೆ ಒಂದು ಕೆಜಿಯಂತೆ 3100 ಕೆಜಿ ಈರುಳ್ಳಿಯನ್ನು ಖರೀದಿಸಿ ವಾಹನ ಬಾಡಿಗೆ 6 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಿದ್ದಾರೆ. ಈ ಮೂಲಕ ಉಪೇಂದ್ರ ಮಾದರಿಯಾಗಿದ್ದಾರೆ.
ಹಿರಿಯೂರಿನ ಈರುಳ್ಳಿ ಬೆಳೆಗಾರ ಮಹೇಶ್ ಎಂಬುವವರು 1 ಎಕರೆಯಲ್ಲಿ ಈರುಳ್ಳಿಯನ್ನು ಬೆಳೆದಿದ್ದರು. ನಂತರ ಕಟಾವು ಮಾಡಿದಾಗ 70 ಚೀಲ ಬೆಳೆ ಬಂದಿತ್ತು. ಅದರಲ್ಲಿ ಮಾರುಕಟ್ಟೆ ಇಲ್ಲದೇ 10 ಕೆಜಿ ಕೊಳೆತಿತ್ತು. ಲಾಕ್ ಡೌನ್ನಿಂದಾಗಿ ಯಾರೂ ಖರೀದಿಸುವವರು ಇಲ್ಲದೇ ರೈತ ಸಂಕಷ್ಟದಲ್ಲಿದ್ದ. ಆಗ ಸಹಾಯಕ್ಕೆ ಬಂದಿದ್ದೇ ಉಪ್ಪಿ.
ಸಹಾಯಕ್ಕೆ ಬಂದಿದ್ದು ಹೇಗೆ | ಇತ್ತೀಚೆಗೆ ನಟ ಉಪೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ‘ರೈತರೇ ನೀವು ಬೆಳೆದ ಬೆಳಗೆ ನಮಗೆ ಕೊಟ್ಟರೆ ಸೂಕ್ತ ಬೆಲೆ ಕೊಟ್ಟು ಬೇಕಿರುವವರಿಗೆ ಹಂಚುತ್ತೇನೆ’ ಎಂದು ಬರೆದುಕೊಂಡಿದ್ದರು. ತಕ್ಷಣ ವಾಟ್ಸಾಪ್ ನಲ್ಲಿ ಸಂಪರ್ಕಿಸಿದ್ದಾರೆ. ಆಗ ಈರುಳ್ಳಿಯನ್ನು ಬೆಂಗಳೂರಿಗೆ ತರುವಂತೆ ಉಪೇಂದ್ರ ತಿಳಿಸಿದ್ದಾರೆ. ಸೂಚನೆಯಂತೆ, ಬೆಂಗಳೂರಿನ ಉಪ್ಪಿ ಅವರ ಮನೆಗೆ ಈರುಳ್ಳಿ ಕೊಂಡೊಯ್ದಿದ್ದಾರೆ. ಮಾತಿನಂತೆ ಈರುಳ್ಳಿ ಖರೀದಿಸಿದ ಉಪೇಂದ್ರ ಅವರು ಬೆಂಗಳೂರಿನವರೆಗೆ ತರಲು ತಗುಲಿದ ಬಾಡಿಗೆಯ ಹಣವನ್ನೂ ಪಾವತಿಸಿದ್ದಾರೆ. ವಿಶೇಷವೆಂದರೆ, ಖರೀದಿ ಮಾಡಿದ ಈರುಳ್ಳಿಯನ್ನು ಉಪ್ಪಿ ಕಾರ್ಮಿಕರಿಗೆ ಹಂಚಿದ್ದಾರೆ.
ಬೊಜ್ಜು ಕರಗಿಸದಿದ್ರೆ ಇನ್ ಕ್ರಿಮೆಂಟ್ ಕಟ್! KSRP ಪೊಲೀಸರಿಗೆ ಟಾರ್ಗೆಟ್