ಹೊಸನಗರ: ಕೋವಿಡ್ ನಿಯಮಗಳ ನಡುವೆ ಮದುವೆಗೆ ಅವಕಾಶ ನೀಡಿದ್ದಲ್ಲದೇ ಬಾಡೂಟಕ್ಕೂ ಅವಕಾಶ ನೀಡಲಾಗಿದೆ ಎಂಬ ಆರೋಪದ ಮೇರೆಗೆ ಬೆಳ್ಳೂರು ಗ್ರಾಪಂ ಪಿಡಿಒಗೆ ಅಮಾನತುಗೊಳಿಸಲಾಗಿದೆ.
READ | ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಸಿಎಂ ಯಡಿಯೂರಪ್ಪ ಅವರಿಗೆ ಭೇಟಿ, ಫ್ರಂಟ್ ಲೈನ್ ವರ್ಕರ್ಸ್ಗೆ ಸುರಕ್ಷತಾ ಕಿಟ್ ವಿತರಣೆ
ರಿಪ್ಪನಪೇಟೆ ಸಮೀಪದ ಬೆಳ್ಳೂರಿನಲ್ಲಿ ಮದುವೆ ಹಾಗೂ ಬಾಡೂಟ ಕಾರ್ಯಕ್ರಮವೂ ನಡೆದಿದೆ. ಇದನ್ನು ನಿಯಂತ್ರಿಸಬೇಕಾದ ಪಿಡಿಒ ರಾಘವೇಂದ್ರ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಜಿಪಂ ಸಿಇಒ ಎಂ.ಎಲ್.ವೈಶಾಲಿ ಅವರು ಅಮಾನತುಗೊಳಿಸಿದ್ದಾರೆ.
ಅಮಾನತು ಬೆನ್ನಲ್ಲೇ ಸಾಮೂಹಿಕ ರಾಜೀನಾಮೆ ಬೆದರಿಕೆ | ಪಿಡಿಒ ಅವರನ್ನು ಬಾಡೂಟ ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದುಕೊಂಡು ಅಮಾನತುಗೊಳಿಸಿದ ಬೆನ್ನಲ್ಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹೊಸನಗರ ಘಟಕದಿಂದ ಇಒ ಮೂಲಕ ಸಿಇಒಗೆ ಮನವಿ ಸಲ್ಲಿಸಲಾಗಿದೆ. ಒಂದುವೇಳೆ, ಅಮಾನತು ಹಿಂಪಡೆಯದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಪಿಡಿಒಗಳ ಸಂಖ್ಯೆ ಕಡಿಮೆ ಇದ್ದು, ಒತ್ತಡದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಹೀಗಿರುವಾಗ, ಅಮಾನತುಗೊಳಿಸಿರುವುದು ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
https://www.suddikanaja.com/2021/02/05/lake-encroachment-clearance-in-shivamogga/