ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ಸೋಮವಾರ ಇಲ್ಲಿನ ಬಸವನಗುಡಿ ಬಡಾವಣೆಯಲ್ಲಿ ತಾಯಿ ಮತ್ತು ಮಗ ಇಬ್ಬರು ಮೃತಪಟ್ಟಿದ್ದಾರೆ.
READ | ಕುಡಿಯುವ ನೀರಿನ ದೋಷದಿಂದಲೂ ಹರಡಲಿದೆ ಬ್ಲ್ಯಾಕ್ ಫಂಗಸ್
ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುರೇಶ್ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ವಿಚಾರವನ್ನು ಮನೆಯಲ್ಲಿದ್ದ ಅವರ ತಾಯಿ ಗೌರಮ್ಮ ಅವರಿಗೆ ತಿಳಿಸಲಾಗಿದೆ. ಇದರಿಂದ ಎದೆಗುಂದಿ ಆಘಾತದಿಂದಲೇ ಅವರು ಮಧ್ಯಾಹ್ನ ಮೃತಪಟ್ಟಿದ್ದಾರೆ. ತಾಯಿ ನಿಧನರಾದ ಕೆಲವೇ ಗಂಟೆಗಳಲ್ಲಿ ಮಗ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಸುರೇಶ್ ಅವರು ಬಡವನಗುಡಿ ನಾಲ್ಕನೇ ಕ್ರಾಸ್ ನಿವಾಸಿಯಾಗಿದ್ದು, ಪ್ಲಾಸ್ಟಿಕ್ ವ್ಯಾಪಾರ ಮಾಡುತಿದ್ದರು ಎಂದು ತಿಳಿದುಬಂದಿದೆ. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.