ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಗಿರಿ ಗ್ರಾಮದ ಮನೆಯೊಂದರಲ್ಲಿ ವಿವಾಹಿತ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
READ | ಆನ್ಲೈನ್ನಲ್ಲೇ ನಡೆಯಲಿದೆ ಟ್ಯಾಲೆಂಟ್ ಹಂಟ್ ಶೋ, ಇದು ದೇಶದಲ್ಲೇ ಮೊದಲ ಯತ್ನ, ಪಾಲ್ಗೊಳ್ಳಲು ಹೀಗೆ ಮಾಡಿ
ಜ್ಯೋತಿ(26) ಎಂಬಾಕೆ ಮೃತಪಟ್ಟಿದ್ದಾಳೆ. ವಿವಾಹ ವಾರ್ಷಿಕೋತ್ಸವ ಮುನ್ನಾ ದಿನವೇ ಘಟನೆ ನಡೆದಿದ್ದು, ಪ್ರಕರಣ ಸಂಬಂಧಪಟ್ಟಂತೆ ಜ್ಯೋತಿಯ ಪತಿ ದಯಾನಂದ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಇವರಿಗೆ ಒಂದು ವರ್ಷದ ಮಗುವಿದೆ. ಯುವತಿಯ ಕುಟುಂಬದವರು ತನ್ನ ಮಗಳ ಕೊಲೆ ನಡೆದಿರುವುದಾಗಿ ಆರೋಪಿಸಿದ್ದಾರೆ. ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.