ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಲಾಕ್ಡೌನ್ ಘೋಷಿಸಲಾಗಿದೆ.
READ | ಶಿವಮೊಗ್ಗದ ಹಲವೆಡೆ ವೀಕೆಂಡ್ ಲಾಕ್ ಡೌನ್, ಹಳ್ಳಿಗಳಲ್ಲಿ ಸೊಂಕು ಉಲ್ಬಣ ತಡೆಗೆ ಸ್ವಯಂ ಪ್ರೇರಿತ ಬಂದ್
ಏನಿರುತ್ತೆ | ನಂದಿನಿ ಔಟ್ಲೇಟ್, ಮೆಡಿಕಲ್, ಆಸ್ಪತ್ರೆ, ದಿನಸಿ ಅಂಗಡಿಗಳು ಹೊರತು ಪಡಿಸಿ ಎಲ್ಲವೂ ಬಂದ್ ಇರಲಿವೆ. ತುರ್ತು ಸಂದರ್ಭದ ಹೊರತುಪಡಿಸಿ ಯಾರೂ ಓಡಾಡುವಂತಿಲ್ಲ. ಹಾಗೊಮ್ಮೆ ಓಡಾಡುವುದು ಕಂಡುಬಂದರೆ ಪೊಲೀಸರು ಮುಲಾಜಿಲ್ಲದೇ ಕ್ರಮಕೈಗೊಳ್ಳಲಿದ್ದಾರೆ.
ಸೋಂಕು ಇರುವೆಡೆ ಇನ್ನಷ್ಟ ಖಡಕ್ ರೂಲ್ಸ್ | ಭದ್ರಾವತಿ ತಾಲೂಕಿನ ಯಾವ ಪ್ರದೇಶಗಳಲ್ಲಿ ಸೋಂಕು ಅಧಿಕ ಸಂಖ್ಯೆಯಲ್ಲಿದೆಯೋ ಅದರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಅಲ್ಲಿಂದ ಯಾರೂ ಓಡಾಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
https://www.suddikanaja.com/2021/05/26/man-killed-a-person-in-bhadravathi/