ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಕಾಯಿಲೆಯಿಂದ ಮೃತಪಡುವವರ ಶವಗಳ ದಹನಕ್ಕೆ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ತಿಳಿಸಿದ್ದಾರೆ.
READ | ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಬಲಿ ಪಡೆದ ಕೊರೊನಾ
ಜಿಲ್ಲೆ ಮತ್ತು ಮಹಾನಗರ ವ್ಯಾಪ್ತಿಯಲ್ಲಿ ಸಾಕಷ್ಟು ಜನ ಕೊರೊನಾದಿಂದ ಮೃತಪಡುತಿದ್ದು, ಶವ ದಹನಕ್ಕೆ ತಗಲುವ ಹಣ ಪಾವತಿಸಲು ಬಡವರಿಗೆ ಕಷ್ಟವಾಗುತ್ತಿದೆ. ಇದನ್ನು ಮನಗಂಡು ಪಾಲಿಕೆಯು ರಾಜೀವ್ ಗಾಂಧಿ ಬಡಾವಣೆ ಸಮೀಪದ ಅನಿಲ ಚಿತಾಗಾರದಲ್ಲಿ ಜುಲೈ 31ರ ವರೆಗೆ ಶುಲ್ಕ ವಿನಾಯಿತಿ ನೀಡಿ ಆದೇಶಿಸಿದೆ.