ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಕರ್ನಾಟಕಕ್ಕೆ ಹೆಮ್ಮಾರಿಯಾಗಿ ಕಾಡುತಿದ್ದು, ಹಲವರ ಜೀವ ನುಂಗಿದೆ. ತುರ್ತು ಸ್ಥಿತಿಯಲ್ಲಿ ಆಂಬ್ಯುಲೆನ್ಸ್ ಲಭಿಸಿದೇ ಸಾಕಷ್ಟು ಜನ ಅಸುನೀಗಿದ್ದಾರೆ. ಸೋಂಕಿತನೆಂದು ತಿಳಿದಿದ್ದರೂ ಆರೋಗ್ಯ ಇಲಾಖೆ ಸಿಬ್ಬಂದಿ ವ್ಯಕ್ತಿಗೆ ಚಿಕಿತ್ಸೆ ನೀಡಲೇಬೇಕು. ಆದರೆ, ಅವರಿಗೆ ನಂಜು ತಗುಲಿದಾಗ ಚಿಕಿತ್ಸೆ ಹೇಗೆ? ಹಲವರು ಬೆಡ್ ಸಿಗದೇ ಮೃತಪಡುತಿದ್ದಾರೆ. ಇದೆಲ್ಲವನ್ನೂ ಮನಗಂಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯದಲ್ಲಿ ‘ಮೈಸೇವಾ’ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ.
https://www.suddikanaja.com/2021/04/26/covid-treatment-under-ayushman-bharat/
ದಿನದ 24 ಗಂಟೆ ಸೇವೆ ನೀಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ. ಜತೆಗೆ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಪಾಸಿಟಿವ್ ಬಂದಲ್ಲಿ ಅಂತಹವರ ಆರೈಕೆಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲು ‘ಮೈಸೇವಾ’ ಮುಂದಾಗಿದೆ.
ಎಲ್ಲ ಜಿಲ್ಲೆಗಳಲ್ಲಿ ಮೈ ಸೇವಾ ತಂಡ | ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೈ ಸೇವಾ ತಂಡ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲೇ ಅಲೆ ಸಂದರ್ಭದಲ್ಲೂ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಾದ್ಯಂತ ಉಚಿತ ಔಷಧ ವಿತರಣೆ ಮಾಡಲಾಗಿತ್ತು. ಎರಡನೇ ಅಲೆಯಲ್ಲಿ ಮೈ ಸೇವಾ ಆರಂಭಿಸಲಾಗಿದೆ. ದಿನದ 24 ಗಂಟೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.
ಶಿವಮೊಗ್ಗದಲ್ಲಿ ಇವರಿಗೆ ಕರೆ ಮಾಡಿ | ಆಂಬ್ಯುಲೆನ್ಸ್ ಸೇವೆಗೆ ವೆಂಕಟೇಶ್ ಬಾಬು 9986624239, ಮೋಹನ್ 9945714799, ಆಕ್ಸಿಜನ್ ಗಾಗಿ ಪ್ರದೀಪ್ 9945925949ಗೆ ಸಂಪರ್ಕಿಸಬಹುದು.
https://www.suddikanaja.com/2020/12/05/train-restart-from-shivamogga-after-covid/