ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವೈರಸ್ ಮಕ್ಕಳ ಪಾಲಿಗೆ ಕಂಟಕ ಆಗುತ್ತದೆ ಎಂದು ವೈದ್ಯರ ಮುನ್ನೆಚ್ಚರಿಕೆ ನೀಡುತ್ತಿರುವುದು ಒಂದೆಡೆಯಾದರೆ 13 ತಿಂಗಳ ಮಗುವನ್ನು ಕ್ರೂರಿ ಕೊರೊನಾ ಬಲಿ ಪಡೆದಿದೆ.
https://www.suddikanaja.com/2020/12/12/mother-killed-her-own-child-in-bengaluru/
ಆಗ ತಾನೆ ಜಗತ್ತಿನ ಪ್ರೀತಿಯನ್ನು ಆಸ್ವಾದಿಸುತಿದ್ದ ಮಗುವನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಇಲ್ಲಿನ ಗಾಂಧಿ ಬಜಾರ್ ಮೂಲದ ದಂಪತಿಗಳ ಮಗು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ವೈದ್ಯರೇನು ಹೇಳುತ್ತಾರೆ | ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಪ್ರಕಾರ, ’13 ತಿಂಗಳ ಮಗುವಿನ ಆರೋಗ್ಯ ಅಷ್ಟೊಂದು ಸರಿ ಇರಲಿಲ್ಲ. ಜನ್ಮದ ದಿನದಿಂದ ಶ್ವಾಸಕೋಶ ಮತ್ತು ಉಸಿರಾಟ ಇತ್ಯಾದಿ ತೊಂದರೆಗಳನ್ನು ಹೊಂದಿತ್ತು. ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಗೆ ಬರುತಿದ್ದರು. ಈ ಸಲವೂ ಉಸಿರಾಟದ ಸಮಸ್ಯೆಯಾಗಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ್ದಾರೆ. ಮೆಗ್ಗಾನ್ ನಿಂದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಕೊರೊನಾ ಪಾಸಿಟಿವ್ ವಿಚಾರ ತಿಳಿದು ಮೆಗ್ಗಾನ್ ಗೆ ಮತ್ತೆ ಕಳುಹಿಸಲಾಗಿದೆ. ಚಿಕಿತ್ಸೆ ನೀಡಲಾಗಿದೆ. ಆದರೆ, ಫಲಕಾರಿಯಾಗದೇ ಮಗು ಅಸುನೀಗಿದೆ.’
ಪೋಷಕರ ಆರೋಪಗಳೇನು | ‘ಮೊದಲು ಖಾಸಗಿಯೊಂದಕ್ಕೆ ದಾಖಲಿಸಲಾಗಿದೆ. ಆದರೆ, ಅಲ್ಲಿ ಆಕ್ಸಿಜನ್ ಕೊರತೆ ಇತ್ತು. ಹೀಗಾಗಿ, ಮಗುವಿನ ಆರೋಗ್ಯ ವಿಷಮಗೊಂಡಿದೆ. ವೈದ್ಯರ ಸಲಹೆಯ ಮೇರೆಗೆ ಮೆಗ್ಗಾನ್ ಗೆ ಕರೆ ತರಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ರಾತ್ರಿ ಮಗುವನ್ನು ಕಳೆದುಕೊಂಡಿದ್ದೇವೆ’ ಎಂದು ಪೋಷಕರು ಆರೋಪಿಸಿದ್ದಾರೆ.
https://www.suddikanaja.com/2020/11/07/new-born-baby/