ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಮೆಗ್ಗಾನ್ ಬೋಧನಾ ಆಸ್ಪತ್ರೆ ಶಿವಮೊಗ್ಗಕ್ಕಷ್ಟೇ ಅಲ್ಲ. ನೆರೆಯ ಜಿಲ್ಲೆಗಳಿಗೂ ಧನವಂತ್ರಿಯಂತೆ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಕಾಲದಲ್ಲಿ ಇದರ ಪ್ರಾಮುಖ್ಯತೆ ಇನ್ನಷ್ಟು ಅಧಿಕವಾಗಿದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುತ್ತಿದೆ.
ಕೊರೊನಾ ಸೋಂಕಿತರ ಚಿಕಿತ್ಸೆಗೆ ಎಲ್ಲಿ ಎಷ್ಟು ಹಾಸಿಗೆ ಲಭ್ಯ ಇವೆ, ರೆಮಿಡಿಸಿವರ್ ಇಂಜೆಕ್ಷನ್ ಸ್ಟಾಕ್ ಇದೆಯೇ?
ಯಾವ ವಿಚಾರಗಳು ಮೇಲ್ದರ್ಜೆಗೇರಲಿವೆ ಎಂಬುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಡ್, ವೆಂಟಿಲೇಟರ್ ಗಳ ಸಂಖ್ಯೆಯಲ್ಲಿ ಏರಿಕೆ | ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಸ್ತುತ ಕೋವಿಡ್ ಚಿಕಿತ್ಸೆಗೆ 650 ಹಾಸಿಗೆ ವ್ಯವಸ್ಥೆಯಿದ್ದು, ಅದನ್ನು ಹಂತ ಹಂತವಾಗಿ 1,400ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. 70 ವೆಂಟಿಲೇಟರ್ ಗಳಿದ್ದು, ಇನ್ನೂ 23 ವೆಂಟಿಲೇಟರ್ ಗಳು ವಾರದ ಒಳಗಾಗಿ ಲಭಿಸಲಿವೆ ಎಂದು ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಲಾಗಿರುವ ಸರ್ಕಾರಿ ಕೋಟಾದ ಹಾಸಿಗೆ ಮತ್ತು ವೆಂಟಿಲೇಟರ್ ಗಳ ಸೌಲಭ್ಯ ಪಡೆದುಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ 10 ವೆಂಟಿಲೇಟರ್ ಗಳನ್ನು ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಒದಗಿಸಲಾಗಿದೆ. ಲಸಿಕೆ ನೀಡುವ ಕಾರ್ಯಕ್ರಮ ನಿಗದಿತ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ.
– ಡಾ.ರಾಜೇಶ್ ಸುರಗಿಹಳ್ಳಿ, ಡಿ.ಎಚ್.ಒ
ಮೂಲಸೌಕರ್ಯದೊಂದಿಗೆ ವೈದ್ಯರ ನೇಮಕ | ನಿರ್ವಹಣೆಗೆ ಹೆಚ್ಚುವರಿಯಾಗಿ ಅಗತ್ಯವಿರುವ 10 ಫಿಜಿಶಿಯನ್ಗಳು, 8 ಅರಿವಳಿಕೆ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ನರ್ಸ್, ಡಿ ಗ್ರೂಪ್ ನೌಕರರ ಅಂಕಿ ಅಂಶಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು. ಪ್ರಸ್ತುತ ಮೆಗ್ಗಾನ್ ಆವರಣದಲ್ಲಿ ವಿವಿಧ ಭಾಗಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯಿದ್ದು, ಅದನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಸೂಚನೆ ನೀಡಿದರು.
READ | ಇದುವರೆಗೆ ಕೊರೊನಾಕ್ಕೆ ಜಿಲ್ಲೆಯಲ್ಲಿ 807 ಜನ ಬಲಿ
ಶಿವಮೊಗ್ಗ ವೈದ್ಯಕೀಯ ಸಂಸ್ಥೆಯಲ್ಲಿ ಹಾಸಿಗೆ ವ್ಯವಸ್ಥೆಯ ಉನ್ನತೀಕರಣ ಸೇರಿದಂತೆ ಎಲ್ಲ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಒದಗಿಸಿದರು. ಮೆಗ್ಗಾನ್ನಲ್ಲಿ ಒಟ್ಟು 1,443 ಹಾಸಿಗೆ ವ್ಯವಸ್ಥೆಯಿದ್ದು, ಇದರಲ್ಲಿ 1,095 ಆಕ್ಸಿಜನ್ ಬೆಡ್ಗಳು ಹಾಗೂ 202 ಐಸಿಯು ಬೆಡ್ಗಳಿವೆ. 16 ಫಿಜಿಷಿಯನ್, 15 ಅರಿವಳಿಕೆ ತಜ್ಞರು, 4 ಪಲ್ಮನಾಲಿಜಿಸ್ಟ್, 4 ರೇಡಿಯಾಲಜಿಸ್ಟ್, 15 ಕೋವಿಡ್ ಡ್ಯೂಟಿ ಡಾಕ್ಟರ್ ಮತ್ತು 11 ಗೃಹ ವೈದ್ಯರಿದ್ದಾರೆ. 334 ನರ್ಸಿಂಗ್ ಅಧಿಕಾರಿಗಳಿದ್ದಾರೆ ಎಂದರು.
READ | ಲಸಿಕೆ ಪಡೆಯಲು ಬೆಳಗ್ಗೆ 6ರಿಂದಲೇ ಕ್ಯೂ, ಶುಗರ್, ಬಿಪಿ ಇರೋರಿಗೆ ಸಂಕಷ್ಟ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ದತ್ತಾತ್ರೇಯ, ಡಿ.ಎಸ್.ಅರುಣ್, ಸಿಮ್ಸ್ ಆಡಳಿತ ಮಂಡಳಿ ಸದಸ್ಯ ದಿವಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
GOOD NEWS | ಭದ್ರಾವತಿ, ಸಾಗರದಲ್ಲಿ ಶೀಘ್ರವೇ ಆಕ್ಸಿಜನ್ ಜನರೇಟರ್ ವ್ಯವಸ್ಥೆ, ಇಳಿಯಲಿದೆ ಮೆಗ್ಗಾನ್ ಮೇಲಿನ ಹೊರೆ