ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಸೋಂಕು ತಗುಲಿದರೂ ಕೆಲವರಲ್ಲಿ ಲಕ್ಷಣಗಳೇ ಇರುವುದಿಲ್ಲ. ಹಾಗಂತ ಎಲ್ಲ ಜ್ವರ, ಶೀತ ಕೋವಿಡ್ ಕಾಯಿಲೆ ಅಲ್ಲ. ಈ ದ್ವಂದ್ವದಲ್ಲಿಯೇ ಸಾಕಷ್ಟು ರೋಗಿಗಳು ತತ್ತರಿಸಿ ಹೋಗಿದ್ದಾರೆ. ಯಾರನ್ನು ಸಂಪರ್ಕಿಸಬೇಕು ಎಂಬ ಸ್ಪಷ್ಟತೆ ಇಲ್ಲ. ಜನರ ಈ ಇಕ್ಕಟ್ಟಿನ ಪರಿಸ್ಥಿತಿಯನ್ನು ಮನಗಂಡು ಭದ್ರಾವತಿ ಮೂಲದ ಡಾ. ಆರ್.ಎನ್.ಪಣೇಶ್ವರ್ ಅವರು ಎಲೆಮರೆ ಕಾಯಿಯಂತೆ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡುತಿದ್ದಾರೆ.
https://www.suddikanaja.com/2021/03/04/ips-officer-yatish-chandra-coming-back-to-karnataka-cadre/
ಪ್ರಸ್ತುತ ಬೆಂಗಳೂರಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ರಾಜ್ಯದಾದ್ಯಂತ ಕೊರೊನಾ ಸೋಂಕಿತರಿಗೆ ಉಚಿತ ಸಲಹೆ ನೀಡುವ ಮಹತ್ವದ ಕೆಲಸ ಮಾಡುತಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭವಾಗಿದ್ದೇ ಜನರು ಆಸ್ಪತ್ರೆಗೆ ಹೋಗುವುದಕ್ಕೂ ಭಯ ಪಡುತಿದ್ದಾರೆ. ಇದನ್ನು ಮನಗಂಡು ಡಾ.ಪಣೇಶ್ವರ್ ಅವರು ಸ್ವರ್ಣ ಟ್ರಾವೆಲ್ಸ್ ಸಹಕಾರದಲ್ಲಿ ಈ ಸಾಮಾಜಿಕ ಕಾರ್ಯಕ್ಕೆ ಮುಂದಡಿ ಬರೆದಿದ್ದಾರೆ. ಈಗಾಗಲೇ ನಿತ್ಯ 40ಕ್ಕೂ ಅಧಿಕ ಕರೆಗಳು ಬರುತ್ತಿವೆ.
ವೈದ್ಯರನ್ನು ಸಂಪರ್ಕಿಸುವುದು ಹೇಗೆ | ಡಾ.ಪಣೇಶ್ವರ್ ಅವರನ್ನು ಸಂಪರ್ಕಿಸಬೇಕಾದರೆ, ಮೊಬೈಲ್ ನಂಬರ್ ಗೆ ಮುಂಚೆಯೇ ಕರೆ ಮಾಡಿ ಹೆಸರು ನೋಂದಣಿ ಮಾಡಿಸಬೇಕು. ಅದಕ್ಕಾಗಿ, ಪ್ರತ್ಯೇಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಹೆಸರು, ರೋಗದ ಲಕ್ಷಣ ಇತ್ಯಾದಿಗಳನ್ನು ತಿಳಿಸಿದ್ದಲ್ಲಿ ವೈದ್ಯರೇ ಖುದ್ದು ಕರೆ ಮಾಡುತ್ತಾರೆ. ರೋಗಿಯ ಅಹವಾಲುಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ.
ಹೆಸರು ನೋಂದಣಿಗಾಗಿ 9448144697ಗೆ ಕರೆ ಮಾಡಿದರೆ ಸಾಕು. ಸಂಜೆ 5 ಗಂಟೆಯ ನಂತರ ವೈದ್ಯರೇ ಕರೆ ಮಾಡಲಿದ್ದಾರೆ. ಮೊಬೈಲ್ ನಲ್ಲೇ ವೈದ್ಯಕೀಯ ವರದಿ ತರಿಸಿಕೊಂಡು ಸಲಹೆ, ಸೂಚನೆಗಳನ್ನು ನೀಡುತ್ತಾರೆ.
https://www.suddikanaja.com/2021/04/04/elephant-attack-on-doctor-at-sakrebailu-elephant-camp/