ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಹಳೇ ವಿದ್ಯಾರ್ಥಿ ಹಾಗೂ ಚಿತ್ರ ಸಾಹಿತಿಯೂ ಆದ ಕವಿರಾಜ್ ಅವರು ತಮ್ಮ ಕಾಲೇಜು ಪರ ದನಿ ಎತ್ತಿದ್ದಾರೆ. ಶ್ರೀಮಂತ ಇತಿಹಾಸ ಹೊಂದಿರುವ ಕಾಲೇಜಿನ ಅಸ್ಮಿತೆಗೆ ಯಾವುದೇ ಕಾರಣಕ್ಕೂ ಧಕ್ಕೆ ಮಾಡಬಾರದು ಎಂದು ತಿಳಿಸಿದ್ದಾರೆ.
https://www.suddikanaja.com/2020/11/29/cm-announced-1-crore-to-kuvempu-university/
ಕಾಲೇಜು ಎಂಬ ಕಲ್ಪನೆಯ ಬಗ್ಗೆಯೂ ಅವರು ವಿವರಿಸಿದ್ದು, ‘ಕಾಲೇಜು ಎಂದರೆ ಕೇವಲ ಕಟ್ಟಡ, ಅಲ್ಲಿಯ ವಸ್ತುಗಳಲ್ಲ. ಪರಿಸರ, ಬಯಲು, ಉದ್ಯಾನ ಎಲ್ಲವೂ ಮುಖ್ಯ. ಹೀಗಾಗಿ, ಕಾಲೇಜನ್ನು ಉಳಿಸಿ’ ಎಂದು ಮನವಿ ಮಾಡಿದ್ದಾರೆ.
‘ನಾವು ಓದುತ್ತಿದ್ದಾಗ ಸಹ್ಯಾದ್ರಿ ಕಾಲೇಜು ಆವರಣ ದೊಡ್ಡದಿತ್ತು. ಈಗ ಹಲವು ಅಭಿವೃದ್ಧಿ ಕಾಮಗಾರಿಗಳಿಂದಾಗಿ ಚಿಕ್ಕದಾಗಿದೆ. ಶಿಕ್ಷಣಕ್ಕೆ ಸಂಬಂಧವಿರದ ಕಾರಣಕ್ಕೆ ಅಲ್ಲಿಯ ಜಾಗವನ್ನು ಬೇರೆ ಯಾರಿಗೋ ಕೊಡುವುದಕ್ಕೆ ನನ್ನ ವಿರೋಧವಿದೆ. ಅಲ್ಲದೆ ಧ್ಯಾನ ಕೇಂದ್ರದ ಅಸ್ಮಿತೆಯನ್ನು ಹಾಳು ಮಾಡಬೇಡಿ’ ಎಂದು ಕೋರಿದ್ದಾರೆ.
https://www.suddikanaja.com/2021/04/26/old-students-stand-for-sahyadri-collage/