ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕೃಷ್ಣರಾಜ ಸಾಗರ ವಾಟರ್ ಹೌಸ್ ಸಮೀಪದ ಗೂಡಂಗಡಿಗೆ ಸಿಮೆಂಟ್ ಲಾರಿಯೊಂದು ಮಂಗಳವಾರ ಬೆಳಗಿನ ಜಾವ ನುಗ್ಗಿದ್ದು, ಲಾರಿ ಚಾಲಕ ಮೃತಪಟ್ಟಿದ್ದಾನೆ.
READ | ಪಟಾಕಿ ಹಾರಿಸಿದ ನಾಲ್ವರು ಯುವಕರ ಮೇಲೆ ಬಿತ್ತು ಕೇಸ್, ಕಾರಣವೇನು ಗೊತ್ತಾ?
ಸಿಮೆಂಟ್ ಚೀಲಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಏಕಾಏಕಿ ಗೂಡಂಗಡಿಗೆ ನುಗ್ಗಿದೆ. ಘಟನೆಯಲ್ಲಿ ತುಮಕೂರು ಜಿಲ್ಲೆಯ ತರುವೆಕೆರೆ ಮೂಲದ ರಾಜು (50) ಎಂಬುವವರು ಮೃತಪಟ್ಟಿದ್ದಾರೆ.
ದುರ್ಘಟನೆ ಸಂಭವಿಸಿದರೂ ಚಾಲಕನ ಮೈಮೇಲೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅದೇ ಲಾರಿಯಲ್ಲಿದ್ದ ಕ್ಲೀನರ್ ಯಾವಯದೇ ಗಾಯಗಳಾಗಿಲ್ಲ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದುವರೆಗೆ ಸಾವಿಗೆ ಖಚಿತ ಕಾರಣ ಪತ್ತೆಯಾಗಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸಾವಿನ ಕಾರಣ ಗೊತ್ತಾಗಲಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.