ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುತಿದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ತಾಲೂಕಿನ ಕೋಹಳ್ಳಿಯಲ್ಲಿ ನಿಷೇಧಾಜ್ಞೆ ಹೊರಡಿಸಿ ತಹಸೀಲ್ದಾರ್ ನಾಗರಾಜ್ ಆದೇಶಸಿದ್ದಾರೆ.
ಸಿ.ಆರ್.ಪಿ.ಸಿ ಸೆಕ್ಷನ್ ಅಡಿ 144 ಜಾರಿಗೆ ಆದೇಶಸಿರುವ ತಹಸೀಲ್ದಾರ್ ಅವರು, ಮೇ 28ರ ಬೆಳಗ್ಗೆ 6 ಗಂಟೆಯಿಂದ 31ರ ಬೆಳಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.
READ | ಲಾಕ್ ಡೌನ್ ನಡುವೆಯೂ ಇಂದು ಕೊರೊನಾ ಸೋಂಕು ಏರಿಕೆ, ಯಾವ ತಾಲೂಕಿನಲ್ಲಿ ಎಷ್ಟು ಕೇಸ್?
ಈಗಾಗಲೇ ಕೋಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಿಂದ ಟಾಸ್ಕ್ ಫೋರ್ಸ್ ನಿಂದ ಲಾಕ್ ಡೌನ್ ಹೇರಲಾಗಿದೆ. ಜತೆಗೆ, ತಹಸೀಲ್ದಾರ್ ಅವರು ನಿಷೇಧಾಜ್ಞೆಗೆ ಆದೇಶಿಸಿದ್ದಾರೆ.
ಪರ್ಮಿಷನ್ ಕಡ್ಡಾಯ | ನಿಷೇಧಾಜ್ಞೆ ಜಾರಿಯಲ್ಲಿ ಇರುವಾಗ ಜನರು ಗುಂಪು ಸೇರುವಂತಿಲ್ಲ. ನಿಗದಿಯಾದ ಕಾರ್ಯಕ್ರಮಗಳು ಆಯೋಜಿಸಬೇಕಾದರೂ ಪರವಾನಗಿ ಪಡೆಯುವುದು ಕಡ್ಡಾಯ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಮೆಡಿಕಲ್, ಹಾಲು, ಆಸ್ಪತ್ರೆ ಅಷ್ಟೇ ತೆರೆಯಲು ಅವಕಾಶವಿದೆ.