ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾಮಾನ್ಯವಾಗಿ ಮಳೆಗಾಲದಲ್ಲಿ ವರ್ಷಧಾರೆ ಶುರುವಾಗುತ್ತಿದ್ದಂತೆ ಗಾಜನೂರು ಜಲಾಶಯದಿಂದ ನೀರು ನದಿಗೆ ಬಿಡಲಾಗುತ್ತದೆ. ಆದರೆ, ಚಂಡಮಾರುತ ಎಫೆಕ್ಟ್ ಗೆ ಹಿನ್ನೀರು ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ತುಂಗೆ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ, ಜಲಾಶಯದಲ್ಲೂ ಒಳಹರಿವು ಏರಿಕೆ ಕಂಡಿದೆ.
READ | ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ, ಮುಂದುವರಿದ ಸಾವಿನ ಆರ್ಭಟ
ಇನ್ನೆರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಜಲಾಶಯ ಭರ್ತಿಗೂ ಮುನ್ನವೇ ಪವರ್ ಹೌಸ್ ಮೂಲಕ 500 ಕ್ಯೂಸೆಕ್ಸ್ ನೀರು ಹೊಳೆಗೆ ಬಿಡಲಾಗಿದೆ. ಕ್ರಸ್ಟ್ ಗೇಟ್ ಗಳನ್ನು ತೆರೆದಿಲ್ಲ.
ಗಾಜನೂರು ಜಲಾಶಯದ ಕ್ರಸ್ಟ್ ಗೇಟ್ ಗಳನ್ನು ತೆರೆದಾಗ ಅದರ ಸೌಂದರ್ಯ ವೀಕ್ಷಿಸುವುದೇ ಖುಷಿ. ಆದರೆ, ಈ ಸಲ ಪವರ್ ಹೌಸ್ ನಿಂದ ನೀರು ಹೊರ ಬಿಟ್ಟಿರುವುದರಿಂದ ಡ್ಯಾಮಿನ ಆ ನಯನ ಮನೋಹರ ದೃಶ್ಯ ಕಾಣಸಿಗಲಿಲ್ಲ.