ಸುದ್ದಿ ಕಣಜ.ಕಾಂ
ಶಿವಮೊಗ್ಗ: ರೋಟರಿ ಚಿತಾಗಾರದಲ್ಲಿ ಶವಗಳನ್ನು ಸುಡುವುದಕ್ಕೆ ಪ್ರಸ್ತುತ 2,100 ರೂಪಾಯಿ ವಿಧಿಸಲಾಗುತ್ತಿದೆ. ಆದರೆ, ಜನರ ಸಂಕಷ್ಟ ಗಮನದಲ್ಲಿಟ್ಟುಕೊಂಡು ಕೇವಲ 1,000 ರೂಪಾಯಿ ಶುಲ್ಕ ಪಡೆಯಲು ನಿರ್ಧರಿಸಲಾಗಿದೆ.
ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಇರುವ ರೋಟರಿಯ ಕಟ್ಟಿಗೆ ಆಧಾರಿತ ಚಿತಾಗಾರದಲ್ಲಿ ಜೂನ್ 4 ರಿಂದ ಜುಲೈ 31ರ ವರೆಗೆ ಮಾತ್ರ ಪ್ರತಿ ಶವದ ದಹನಕ್ಕೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಚಿತಾಗಾರ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಲ್.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.