ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೈಸೂರು- ತಾಳಗುಪ್ಪ ರೈಲು ವೇಳಾಪಟ್ಟಿಯು ಜೂನ್ 7ರಿಂದ ಬದಲಾವಣೆಯಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
https://www.suddikanaja.com/2021/01/19/emu-dead-in-shivamogga-zoo-and-safari/
ಮೈಸೂರಿನಿಂದ ಸಂಜೆ 7ಕ್ಕೆ ಹೊರಟು ತಾಳಗುಪ್ಪಕ್ಕೆ ಬೆಳಗ್ಗೆ 6.15ರಿಂದ 7ಕ್ಕೆ ತಲುಪುತಿದ್ದ ಸಮಯದಲ್ಲಿ ಬದಲಾವಣೆಯಾಗಿದೆ.
ಬದಲಾದ ವೇಳಾಪಟ್ಟಿ | ಮೈಸೂರಿನಿಂದ ಕಡೂರುವರೆಗೆ ರೈಲಿನ ವೇಳೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಬೀರೂರಿಗೆ ಬೆಳಗ್ಗೆ 2.53ಕ್ಕೆ ತಲುಪಿ ಅಲ್ಲಿಂದ 2.55ಕ್ಕೆ ಹೊರಡಲಿದೆ. ಭದ್ರಾವತಿಗೆ 4.20ಕ್ಕೆ ಬಂದು 4.30ಕ್ಕೆ ಹೊರಡಲಿದೆ. ಶಿವಮೊಗ್ಗಕ್ಕೆ 5ಕ್ಕೆ ಬಂದು 5.05ಕ್ಕೆ ಹೊರಟು ತಾಳಗುಪ್ಪಕ್ಕೆ ಬೆಳಗ್ಗೆ 7.10ಕ್ಕೆ ತಲುಪಲಿದೆ.
ವೇಳೆ ಬದಲಾವಣೆಗೇನು ಕಾರಣ | ಈ ಮುಂಚೆ ಶಿವಮೊಗ್ಗಕ್ಕೆ 3.30ರಿಂದ 4.10 ಗಂಟೆಗೆ ತಲುಪುತಿತ್ತು. ಕೋವಿಡ್ ಹಿನ್ನೆಲೆ ಸರಿಯಾಗಿ ಆಟೋ ಸಿಗದೇ ಮಹಿಳೆಯರು, ವೃದ್ಧರು ಸೇರಿ ಪ್ರಯಾಣಿಕರು ಪರದಾಡುತ್ತಿದ್ದರು. ಇದನ್ನು ಮನಗಂಡು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
https://www.suddikanaja.com/2020/12/31/bangalore-talaguppa-intercity-express-train-derail-near-kumsi-shivamogga/