ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -52 ರ ಬಾಳೆಬರೆ ಘಾಟ್ನಲ್ಲಿ ಕಾಂಕ್ರಿಟ್ ಪೇವ್ಮೆಂಟ್ ಕಾಮಗಾರಿ ಹಿನ್ನೆಲೆ ಜೂನ್15ರ ವರೆಗೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಶಿವಮೊಗ್ಗದಲ್ಲಿ ತೆರೆ ಕಾಣಲಿದೆ ‘ಕುಂದಾಪುರ’ ಸಿನಿಮಾ, ಉಡುಪಿ ಸುತ್ತ ಶೂಟಿಂಗ್, ಸಸ್ಪೆನ್ಸ್, ಕಾಮಿಡಿ ಮೂವಿ
ಈ ಮುಂಚೆ ವಾಹನ ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಜೂನ್ 5ರ ವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಪ್ರಾಕೃತಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಹೀಗಾಗಿ, ಜೂನ್ 15ರ ವರೆಗೆ ಈ ಅಧಿಸೂಚನೆಯನ್ನು ವಿಸ್ತರಿಸಲಾಗಿದೆ.
ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52 ರ ಬಾಳೆಬರೆ ಘಾಟ್ 40.48 ರಿಂದ 41.274 ಹಾಗೂ 42.332 ರಿಂದ 43.00 ರ ಎರಡು ಭಾಗದಲ್ಲಿ 1500 ಮೀಟರ್ ಕಾಂಕ್ರೀಟ್ ಪೇವ್ಮೆಂಟ್ ಕಾಮಗಾರಿ ನಡೆಯಲಿದೆ.
ನಿಗದಿಯಂತೆ ಜೂನ್ 5ರೊಳಗೆ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಅಕಾಲಿಕ ತೌಕ್ತೆ ಮತ್ತು ಯಾಸ್ ಚಂಡಮಾರುಗಳು ಪ್ರಾರಂಭವಾದ್ದರಿಂದ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ನಿಗದಿತ ಕಾಲಾವಕಾಶದೊಳಗೆ ಮುಗಿಸಲು ಸಾಧ್ಯವಾಗದೇ ಇರುವುದರಿಂದ ವಾಹನ ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗ ಅಧಿಸೂಚನೆಯನ್ನು ಜೂನ್ 15 ರವರೆಗೆ ವಿಸ್ತರಿಸಿ ಕೆಳಕಂಡ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶಸಿದ್ದಾರೆ.
ಸಂಚಾರಕ್ಕೆ ಪರ್ಯಾಯ ಮಾರ್ಗ
- ರಾಜ್ಯ ಹೆದ್ದಾರಿ 52 ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು | ತೀರ್ಥಹಳ್ಳಿ- ಕಾನುಗೋಡು- ನಗರ-ಕೊಲ್ಲೂರು- ಕುಂದಾಪುರ ರಸ್ತೆ.
- ತೀರ್ಥಹಳ್ಳಿ-ಯಡೂರು-ಹುಲಿಕಲ್ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು | ತೀರ್ಥಹಳ್ಳಿ- ಯಡೂರು- ಮಾಸ್ತಿಕಟ್ಟೆ- ನಗರ- ಕೊಲ್ಲೂರು- ಕುಂದಾಪುರ ರಸ್ತೆ
- ಶಿವಮೊಗ್ಗ ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು | ಹೊಸನಗರ- ನಗರ- ಕೊಲ್ಲೂರು-ಕುಂದಾಪುರ ರಸ್ತೆ
- ಶಿವಮೊಗ್ಗ/ಸಾಗರ ಹಾಗೂ ತೀರ್ಥಹಳ್ಳಿ ಕಡಯಿಂದ ಕುಂದಾಪುರಕ್ಕೆ ಹೋಗುವ ಭಾರೀ ಪ್ರಮಾಣದ ವಾಹನಗಳು | ಬಟ್ಟೆಮಲ್ಲಪ್ಪ- ಸಾಗರ- ಗೇರುಸೊಪ್ಪ- ಹೊನ್ನಾವರ- ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದು.