ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆಯನ್ನು ಇನ್ ಸ್ಪೆಕ್ಟರ್ ಶ್ರೇಣಿಗೆ ಮೇಲ್ದರ್ಜೆಗೇರಿಸಿದ ಬಳಿಕ ಇನ್ ಸ್ಪೆಕ್ಟರ್ ಆಗಿ ಆರ್.ಎಲ್.ಲಕ್ಷ್ಮೀಪತಿ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಹೊಳೆಹೊನ್ನೂರು ಮೊದಲ ಇನ್ ಸ್ಪೆಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಲಕ್ಷ್ಮೀಪತಿ ಅವರು 2007ರಲ್ಲಿ ಪಿಎಸ್.ಐ ಆಯ್ಕೆಯಾಗಿದ್ದರು. ಇವರ ಸೇವೆ ಆರಂಭವಾಗಿದ್ದು ಚಿಕ್ಕಮಗಳೂರು ಜಿಲ್ಲೆಯಿಂದ. ಬಳಿಕ, ದಾವಣಗೆರೆ, ಭದ್ರಾವತಿ ಪೇಪರ್ ಟೌನ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪದೋನ್ನತಿ ಹೊಂದಿ ದಾವಣಗೆರೆ ಲೋಕಾಯುಕ್ತ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.