ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ವೃದ್ಧಾಪ್ಯ ವೇತನವನ್ನು ಅಂಚೆ ಕಚೇರಿಯಿಂದ ಕೊಂಡೊಯ್ಯುವಾಗ ಇಬ್ಬರು ಯುವಕರು ವೃದ್ಧೆಯ ಕತ್ತು ಹಿಸುಕಿದ್ದು, ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ತಾಲೂಕಿನ ಕಟ್ಟೆಹಕ್ಕಲು ಸಮೀಪ ಘಟನೆ ನಡೆದಿದೆ. ಭವಾನಿಯಮ್ಮ(85) ಎಂಬಾಕೆಯೇ ಮೃತಪಟ್ಟ ವೃದ್ಧೆ. ಅಂಚೆ ಕಚೇರಿಯಿಂದ ವೃದ್ದಾಪ್ಯ ವೇತನ ಸ್ವೀಕರಿಸಿ ಮನೆಗೆ ಹೋಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಏಕಾಏಕಿ ಸಾರ್ವಜನಿಕ ಪ್ರದೇಶದಲ್ಲಿಯೇ ವೃದ್ಧೆಯ ಕತ್ತು ಹಿಸುಕಲು ಆರಂಭಿಸಿದ್ದಾರೆ. ಆಕೆ ಕಿರುಚಾಡಿದರೂ ಬಿಟ್ಟಿಲ್ಲ. ತಕ್ಷಣ ಸ್ಥಳೀಯರು ಬಿಡಿಸಲು ಬಂದಿದ್ದಾರೆ. ಆಗ ಒಬ್ಬ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಇನ್ನೊಬ್ಬನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ಶಿವಮೊಗ್ಗ ಗೋಪಾಳ ನಿವಾಸಿ ನಿತೀನ್ (36) ಎಂದು ಗುರುತಿಸಲಾಗಿದೆ. ಕತ್ತು ಹಿಸುಕಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದ ವೃದ್ಧೆಗೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಲಾಗಿದೆ. ಹೆಚ್ಚುವರಿ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.