ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿನ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 10 ಜನರಲ್ಲಿ ಐವರಿಗೆ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವಂತೆ ಕೋರಿದ್ದ 10 ಆರೋಪಿಗಳಲ್ಲಿ ಐವರ ಅರ್ಜಿಗಳನ್ನು ನ್ಯಾಯಾಧೀಶ ಮುಸ್ತಫಾ ಹುಸೇನ್ ವಜಾಗೊಳಿಸಿದ್ದಾರೆ.
ಯಾರಿಗೆ ಸಿಕ್ಕಿತು ಜಾಮೀನು | ಕಲ್ಲು ಕ್ವಾರಿ ನಡೆಸುತ್ತಿದ್ದ ಭೂಮಿಯ ಮಾಲೀಕ ಎಸ್.ಟಿ.ಕುಲಕರ್ಣಿ ಹಾಗೂ ಅವರ ಮಗ ಅವಿನಾಶ್ ಕುಲಕರ್ಣಿ, ಕ್ವಾರಿಯ ಕಾರ್ಮಿಕರಾದ ಮಮ್ತಾಜ್ ಅಹಮ್ಮದ್, ರಿಷೀದ್, ನರಸಿಂಹ ಎಂಬುವವರಿಗೆ ಜಾಮೀನು ಮಂಜೂರು ಆಗಿದೆ.
ಯಾರ ಅರ್ಜಿ ತಿರಸ್ಕಾರ | ಆಂಧ್ರ ಪ್ರದೇಶದ ಸ್ಫೋಟಕ ದಾಸ್ತಾನು ಗೋದಾಮು ಮಾಲೀಕ ಶ್ರೀರಾಮಲು ಅವರ ಮಕ್ಕಳಾದ ಪಿ.ಮಂಜುನಾಥ್ ಸಾಯಿ, ಪೃಥ್ವಿರಾಜ್ ಸಾಯಿ, ಗೋದಾಮು ಕೆಲಸಗಾರ ವಿಜಯ್ ಕುಮಾರ್, ಕಲ್ಲು ಕ್ವಾರಿ ಮಾಲೀಕ ಸುಧಾಕರ್ ಅವರಿಗೆ ಜಾಮೀನು ಸಿಕ್ಕಿಲ್ಲ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.