ಸುದ್ದಿ ಕಣಜ.ಕಾಂ
ಭದ್ರಾವತಿ: ಕೊರೊನಾ ಪಾಸಿಟಿವ್ ಬಂದವರ ಬಳಿ ಸಂಬಂಧಿಕರು ಬರುವುದೇ ಕಷ್ಟ. ಅಂತಹದ್ದರಲ್ಲಿ ಇಲ್ಲೊಬ್ಬರು ಕೊರೊನಾ ರೋಗಿಗಳಿಗೆ ಅಗತ್ಯ ಸಹಾಯ ಮಾಡುವುದಲ್ಲದೇ ಅಂತ್ಯಸಂಸ್ಕಾರ ಇತ್ಯಾದಿಗಳಲ್ಲೂ ನೆರವು ನೀಡಿದ್ದಾರೆ. ಈ ಮೂಲಕ ಜನರ ಪಾಲಿಗೆ ಆಪತ್ಬಾಂಧವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
READ | ಜೂನ್ 18ರಿಂದ ಶಿವಮೊಗ್ಗ-ಬೆಂಗಳೂರು ನಡುವೆ ರೈಲು ಸಂಚಾರ ಆರಂಭ, ಯಾವ ರೈಲು ಸೇವೆ ಪುನಾರಂಭ, ಇಲ್ಲಿದೆ ಮಾಹಿತಿ
ಬಿಜೆಪಿ ಯುವ ನಾಯಕ ಎನ್.ಗೋಕುಲ್ ಕೃಷ್ಣನ್ ಎನ್ನುವವರೇ ಜನರ ಸಹಾಯಕ್ಕೆ ನಿಂತಿದ್ದಾರೆ. ಯಾರೇ ಕಷ್ಟ ಎಂದು ಬಂದರೂ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಭದ್ರಾವತಿಯಲ್ಲಿ 2,500 ಫುಡ್ ಕಿಟ್ ವಿತರಣೆ ಮಾಡಿದ್ದಾರೆ. ಕೋವಿಡ್ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದ ವಯೋವೃದ್ಧರಿಗೆ ಔಷಧ ವಿತರಣೆ ಮಾಡಿದ್ದಾರೆ. ಹಿರಿಯೂರು ವ್ಯಾಪ್ತಿಯ ಎಲ್ಲ ಪಂಚಾಯಿತಿಗಳಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ.