ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನ ಆನಂದಪುರಂ ಸಮೀಪ ಜೇಡಿಸರ ಗ್ರಾಮದಲ್ಲಿ ಯುವಕನೊಬ್ಬ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇವರಾಜ್(25) ಆತ್ಮಹತ್ಯೆಗೆ ಶರಣಾದ ಯುವಕ. ಖಿನ್ನತೆಗೆ ಒಳಗಾಗಿ ಯುವಕ ಮನೆ ಬಳಿಯ ಆಲದ ಮರಕ್ಕೆ ನೇಣು ಬೀಗಿದುಕೊಂಡಿದ್ದಾನೆ.
READ | ಪಿಳ್ಳಂಗಿರಿ ಪ್ರಸಿದ್ಧ ದೇವಸ್ಥಾನದಲ್ಲಿ ಕಳ್ಳತನ, ದೇವರ ಆಭರಣಗಳ ಕಳವು
ಸರ್ಕಾರಿ ಕೆಲಸಕ್ಕೆ ಪ್ರಯತ್ನ | ಬಿಎ, ಬಿಎಡ್ ಪದವಿಧರನಾಗಿದ್ದ ದೇವರಾಜ್, ಸರ್ಕಾರಿ ನೌಕರಿ ಪಡೆಯುವುದಕ್ಕೆ ಪ್ರಯತ್ನ ನಡೆಸುತ್ತಿದ್ದ.
ಜೀವನ ನಿರ್ವಹಣೆಗಾಗಿ ಶಿವಮೊಗ್ಗದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ, ಲಾಕ್ ಡೌನ್ ಹಿನ್ನೆಲೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.