ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಜೂನ್ 21ರಿಂದ ಪುನರ್ ಆರಂಭವಾಗಲಿವೆ.
https://www.suddikanaja.com/2021/04/08/special-train-from-bangalore-to-shivamogga-due-to-ksrtc-protest/
ಮೊದಲ ದಿನ 150 ಬಸ್ ಸಂಚರಿಸಲಿವೆ. ಶಿವಮೊಗ್ಗದಿಂದ ದಾವಣಗೆರೆ, ಹಾವೇರಿ, ಬೆಂಗಳೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಬಸ್ ಸಂಚಾರ ಇರಲಿದೆ. ಇನ್ನುಳಿದಂತೆ, ಕಲಬುರಗಿ, ಮೈಸೂರು, ಉಡುಪಿ, ಹೈದರಾಬಾದ್, ಚೆನ್ನೈ ಕಡೆಗೆ ಬಸ್ ಬಿಡುವುದು ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿಗೆ ನೆಗೆಟಿವ್ ವರದಿ ಕಡ್ಡಾಯ | ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ಕಡ್ಡಾಯವಾಗಿ 72 ಗಂಟೆಯೊಳಗೆ ಪರೀಕ್ಷೆಗೆ ಒಳಪಟ್ಟ ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು. ಇಲ್ಲದಿದ್ದರೆ ಅವಕಾಶ ನೀಡುವುದಿಲ್ಲ. ಒಂದುವೇಳೆ, ಸಿಬ್ಬಂದಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಲ್ಲಿ ಅವರಿಗೆ ನೆಗೆಟಿವ್ ವರದಿಯ ಅಗತ್ಯ ಇರುವುದಿಲ್ಲ. ಒಂದು ಡೋಸ್ ಪಡೆದವರು ರಿಪೋರ್ಟ್ ತರಬೇಕು ಎಂದು ಹೇಳಿದ್ದಾರೆ.
ಬಸ್ ಗಳನ್ನು ಸ್ಯಾನಿಟೈಸ್ ಮಾಡಿಯೇ ಹೊರಬಿಡಲಾಗುವುದು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಈ ಎಲ್ಲವುಗಳ ಬಗ್ಗೆ ಸಾರಿಗೆ ಸಂಸ್ಥೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದೆ.
https://www.suddikanaja.com/2020/12/14/bus-operating-started-from-shivamogga/