ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸೋಮವಾರ ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭಗೊಂಡಿದೆ. ಮೂರ್ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನರ್ ಆರಂಭಗೊಂಡಿದ್ದು, ಸರ್ಕಾರಿ ನೌಕರರು, ವಿವಿಧೆಡೆ ಹೋಗಬೇಕಾದವರು ಇಂದು ಬಸ್ ಗಳ ಪ್ರಯೋಜನ ಪಡೆದರು.
ಕೆ.ಎಸ್.ಆರ್.ಟಿ.ಸಿ ನಿಲ್ದಾಣದಲ್ಲಿ ಬಸ್ ಸಂಚಾರ ಹೇಗಿದೆ, ಊರುಗಳಿಗೆ ಪ್ರಯಾಣಿಸಬಹುದೆ? ಮಾಹಿತಿಗಾಗಿ ಕೆಳಗಿನ ವಿಡಿಯೋ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ⇓
ಬಸ್ ಸಂಚಾರದ ಮೊದಲ ದಿನವಾದ ಸೋಮವಾರ ನಿರೀಕ್ಷಿತ ಮಟ್ಟದಲ್ಲಿ ಜನ ಓಡಾಟ ಇಲ್ಲ. ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ದೂರದ ಅಂತರ ಇರುವ ಹುಬ್ಬಳ್ಳಿ ಬಿಟ್ಟರೆ ಬೇರೆಡೆ ಬಸ್ ಸಂಚಾರ ಲಭ್ಯವಿಲ್ಲದೇ ಇರುವುದರಿಂದ ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗೆ ಹೋಗುವವರ ಸಂಖ್ಯೆಯೇ ಅಧಿಕವಿದೆ.
ರಾಜ್ಯ ಸರ್ಕಾರದ ಸೂಚನೆಯಂತೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಬಸ್ ಸೇವೆ ನೀಡಲಾಗುತ್ತಿದೆ. ಜತೆಗೆ, ಪ್ರತಿ ಬಸ್ಸಿಗೆ 30 ಜನ ಮಾತ್ರ ಲಭ್ಯವಿರುವುದರಿಂದ ಅಷ್ಟು ಜನರನ್ನು ಮಾತ್ರ ಕರೆದುಕೊಂಡು ಬಸ್ ಸಂಚರಿಸುತ್ತಿವೆ.
ಯಾವ ಮಾರ್ಗಕ್ಕೆ ಎಷ್ಟು ಬಸ್ | ಮೊದಲ ದಿನ ಜಿಲ್ಲಾ ಕೇಂದ್ರದಿಂದ ನಾನಾ ಭಾಗಗಳಿಗೆ ಬಸ್ ಗಳನ್ನು ಬಿಡಲಾಗಿದೆ. ಬೆಳಗ್ಗೆ 11 ಗಂಟೆಯವರೆಗೆ 60 ಬಸ್ ಸಂಚರಿಸಿವೆ. ಬೆಂಗಳೂರಿಗೆ 8 ಬಸ್, ಹರಿಹರ 11, ಚಿಕ್ಕಮಗಳೂರು 5, ಶಿಕಾರಿಪುರ, ಹುಬ್ಬಳಿ 7, ಶಿವಮೊಗ್ಗ -ಭದ್ರಾವತಿ ಪ್ರತಿ 20 ನಿಮಿಷಕ್ಕೆ ಒಂದು ಬಸ್ ಸಂಚಾರ ಲಭ್ಯವಿದೆ. 12 ಗಂಟೆಯ ನಂತರ ಶಿವಮೊಗ್ಗದಲ್ಲಿ ಲಾಕ್ ಡೌನ್ ಇರುವುದರಿಂದ 11ರ ಬಳಿಕ ಬಸ್ ನಿಲ್ದಾಣದಲ್ಲಿ ಜನರ ಸಂಚಾರವೂ ಇಳಿಮುಖವಾಗಿದೆ.
https://www.suddikanaja.com/2021/06/20/bus-service-start-from-shivamogga/