ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಕಲ್ಲಪ್ಪನ ಕೇರಿಯಲ್ಲಿ ಅಕ್ರಮವಾಗಿ ಸಾಗುವನಿ ಸೈಜುಗಳನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಗಳನ್ನು ಶಂಕರ ವಲಯ ಸಿಬ್ಬಂದಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಸಾಗಾಟದಲ್ಲಿ ತೊಡಗಿದ್ದ ಆಯನೂರಿನ ಲಾಡಿರ್ ಕೇರಿ ನಿವಾಸಿ ಸೈಯ್ಯದ್ ಉಸ್ಮಾನ್, ಆಯನೂರಿನ ಸಾಲುಮನೆ ನಿವಾಸಿ ಸುಬೇರ್ ಉಲ್ಲಾ ಎಂಬುವವರನ್ನು ಬಂಧಿಸಲಾಗಿದೆ. ಜಿಯಾ ಉಲ್ಲಾ ಮತ್ತಿತರರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಸಾಗುವಾನಿ ಸೈಜು, ಓಮ್ನಿ ವ್ಯಾನ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಗಿರೀಶ್ ಸಂಕ್ರಿ, ಉಪ ವಲಯ ಅರಣ್ಯಾಧಿಕಾರಿ ಅಬ್ದುಲ್ ಮಜೀದ್, ಉಮೇಶ್ ನಾಯ್ಕ್, ಅರಣ್ಯ ರಕ್ಷಕರಾದ ಜಿ.ಅವಿನಾಶ್, ಜೆ.ಆನಂದ್, ನೀಲಮ್ಮ ದಾದ್ಮಿ, ಚೆಲುವಮಣಿ, ಬಿ.ಬಿ. ಮಂಜುನಾಥ್ ಕಾರ್ಯಾಚರಣೆ ನಡೆಸಿದ್ದಾರೆ.