ಸುದ್ದಿ ಕಣಜ.ಕಾಂ
ದಾರಿಯನ್ನೇ ಬದಲಿಸಿಕೊಂಡ ಗಜಪಡೆ, ತೋಟಕ್ಕೆ ನುಗ್ಗಿ ಮಾಡಿದ ದಾಂಧಲೆ, ಬಾಳೆ, ಅಡಕೆ ಗಿಡ ಧ್ವಂಸ ಆನೆ ಬುದ್ಧಿವಂತ ಪ್ರಾಣಿ ಎಂಬುವುದು ಗುಟ್ಟಾಗೇನಿಲ್ಲ. ಮನುಷ್ಯರ ಎಲ್ಲ ಲೆಕ್ಕಾಚಾರಗಳನ್ನು ಉಲ್ಟಾ ಮಾಡುವಷ್ಟು ಶಕ್ತಿ ಈ ಆನೆ ಸಂತತಿಗಿದೆ. ಅದು ಮತ್ತೊಮ್ಮೆ ಸಾಬೀತು ಆಗಿದೆ.
https://www.suddikanaja.com/2021/02/03/farmer-protest-in-shivamogga/
ಕೆಲವು ತಿಂಗಳುಗಳ ಹಿಂದಷ್ಟೇ ಉಂಬ್ಳೆಬೈಲು ಭಾಗದಲ್ಲಿ ಪುಂಡಾಟ ಮೆರೆದಿದ್ದ ಗಜ ಪಡೆಯನ್ನು ಮತ್ತೆ ಕಾಡಿಗೆ ಅಟ್ಟುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಟ್ರಂಚ್ ಹಾಕಿದ್ದರು. ಆದರೆ, ಆನೆಗಳು ತಮ್ಮ ದಾರಿಯನ್ನು ಬದಲಿಸಿಕೊಂಡಿವೆ.
ಅಡಕೆ, ಬಾಳೆ ಗಿಡಗಳು ಧ್ವಂಸ | ಈ ಸಲ ಲಿಂಗಾಪುರ ಮಾರ್ಗವಾಗಿ ಲಕ್ಕಿನಕೊಪ್ಪದ ಗ್ರಾಮಗಳಿಗೆ ನುಗ್ಗಿವೆ. ಅಲ್ಲಿಯ ತೋಟಗಳಿಗೆ ನುಗ್ಗಿದ ಆನೆಗಳು ಬಾಳೆ, ಅಡಕೆ ಮತ್ತು ತೆಂಗಿನ ಮರಗಳಿಗೆ ಹಾನಿ ಮಾಡಿವೆ. ಅಡಕೆ ಮರಗಳನ್ನು ಬುಡ ಸಮೇತ ಕಿತ್ತೊಗೆದಿವೆ.
ಗ್ರಾಮಸ್ಥರಲ್ಲಿ ಆತಂಕ | ಆನೆಗಳು ಲಕ್ಕಿನಕೊಪ್ಪಕ್ಕೆ ನುಗ್ಗಿ ಪುಂಡಾಟ ಮಾಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇನ್ನೇನು ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದಾರೆ ಎನ್ನುವ ಹೊತ್ತಿಗೆ ಮತ್ತೊಮ್ಮೆ ಆನೆಗಳ ಕಾಟ ಶುರುವಾಗಿದೆ. ಇದರಿಂದ ಭಾರಿ ನಷ್ಟವಾಗುತ್ತಿದೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.suddikanaja.com/2020/12/01/barekal-batteri-main-gate-wrack-for-treasure/