ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಿಮ್ಮಲ್ಲಿ ಬಿಪಿಎಲ್ ಕಾರ್ಡ್ ಇದೆಯೇ? ಹಾಗಾದರೆ, ಮಹಾನಗರ ಪಾಲಿಕೆಯು ನಿಮಗೆ ದಿನಸಿ ಕಿಟ್ ನೀಡಲಿದೆ. ಕೊರೊನಾ ಸಂಕಷ್ಟದಲ್ಲಿ ಇದು ಪ್ರಯೋಜನಕಾರಿಯಾಗಲಿದೆ.
https://www.suddikanaja.com/2021/06/04/vaccination-drive-will-conduct-for-people-in-shivamogga/
ಬಡವರಿಗೆ ವಿತರಿಸಲು ಉದ್ದೇಶಿಸಿರುವ ದಿನಸಿ ಕಿಟ್ ಗಳನ್ನು ನಗರದ ಜಯದೇವ ರೈಸ್ ಮಿಲ್ ಆವರಣದಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಮೇಯರ್ ಸುನೀತಾ ಅಣ್ಣಪ್ಪ ನೇತೃತ್ವದಲ್ಲಿ ಸೋಮವಾರ ಪರಿಶೀಲಿಸಲಾಗಿದೆ.
‘ಬುಧವಾರ ಮಧ್ಯಾಹ್ನ 12 ಗಂಟೆಗೆ ಪಾಲಿಕೆ ಆವರಣದಲ್ಲಿ ಸಾಂಕೇತಿಕವಾಗಿ ಕಿಟ್ ಗಳನ್ನು ವಿತರಣೆ ಮಾಡಲಾಗುವುದು. ನಂತರ, ನಗರದಲ್ಲಿ ಒಟ್ಟು 46,500 ಆಹಾರದ ಕಿಟ್ ಗಳನ್ನು ಅರ್ಹರಿಗೆ ನೀಡಲಾಗುವುದು’ ಎಂದು ಮೇಯರ್ ಸುನೀತಾ ಅಣ್ಣಪ್ಪ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಕಿಟ್ ನಲ್ಲಿ ಏನಿದೆ | ಬೇಳೆ, ಸಾಂಬಾರ ಪದಾರ್ಥ, ಎಣ್ಣೆ, ರವೆ, ಸಕ್ಕರೆ, ಉಪ್ಪು ಸೇರಿದಂತೆ 9 ಬಗೆಯ ದಿನಸಿ ವಸ್ತುಗಳಿವೆ. ಒಂದು ಕಿಟ್ ಬೆಲೆ 449 ರೂಪಾಯಿ ಇದೆ. ಇದಕ್ಕಾಗಿ 2.10 ಕೋಟಿ ರೂಪಾಯಿ ವ್ಯಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ಪಡೆದವರಿಗೆ ರೂ.25 ಸಾವಿರ | ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಲಕ್ಷಾಂತರ ಖರ್ಚು ಮಾಡಿದ ಬಡವರ ಸಹಾಯಕ್ಕೆ ಪಾಲಿಕೆ ನಿಲ್ಲಲಿದೆ. ಬಡವರಿಗೆ 25 ಸಾವಿರ ರೂಪಾಯಿ ವಿತರಣೆ ಮಾಡಲಾಗುವುದು. ಅದಕ್ಕಾಗಿ, ಅರ್ಹರು ಸೂಕ್ತ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು. ಅಂತಹವರಿಗೆ ಹಣ ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ.
ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚೆನ್ನಬಸಪ್ಪ, ಸ್ತಾಯಿ ಸಮಿತಿ ಅಧ್ಯಕ್ಷರಾದ ಧೀರರಾಜ್ ಹೊನ್ನವಿಲೆ, ಮಂಜುಳಾ ಶಿವಣ್ಣ, ಶಶಿಕುಮಾರ್, ಅನಿತಾ ರವಿಶಂಕರ್, ಆಯುಕ್ತ ಚಿದಾನಂದ್ ವಟಾರೆ ಉಪಸ್ಥಿತರಿದ್ದರು.
https://www.suddikanaja.com/2021/03/30/dc-warning-to-return-disqualified-card/