ಸುದ್ದಿ ಕಣಜ.ಕಾಂ
ಬೆಂಗಳೂರು: ಒಂದೆಡೆ ಪೆಟ್ರೋಲ್ ಬೆಲೆ ಏರಿಕೆ, ಮತ್ತೊಂದೆಡೆ ಕೊರೊನಾ ಬಿಸಿಗೆ ಜನ ಸುಸ್ತಾಗಿದ್ದಾರೆ. ಇದರ ನಡುವೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆ.ಇ.ಆರ್.ಸಿ)ವು ಪ್ರತಿ ಯೂನಿಟ್ ಸರಾಸರಿ 30 ಪೈಸೆ ದರ ಏರಿಕೆ ಮಾಡಲಾಗಿದೆ. ಅಂದರೆ, ಶೇ.3.84ರಷ್ಟು ದರ ಏರಿಕೆಯಾಗಿದೆ.
https://www.suddikanaja.com/2021/06/01/corona-patient-jump-from-ambulance/
ಏಪ್ರಿಲ್ 1ರಿಂದ ಅನ್ವಯ ಅನ್ವಯವಾಗುವಂತೆ ಪರಿಷ್ಕøತ ದರ ಜಾರಿಗೆ ಬರಲಿದ್ದು, ಮೊದಲ ಮೀಟರ್ ಓದುವ ದಿನಾಂಕದಿಂದ ಬಳಸಲಾಗುವ ವಿದ್ಯುಚ್ಛಕ್ತಿಗೆ ಅನ್ವಯವಾಗುವಂತೆ ಜಾರಿಗೆ ತರಲು ಆಯೋಗ ನಿರ್ಧರಿಸಿದೆ. ಆದಾಗ್ಯೂ ದರ ಹೆಚ್ಚಳದಿಂದಾಗಿ ಗ್ರಾಹಕರ ಮೇಲಿನ ಹೊರೆಯನ್ನು ಮೃದುಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ ಕೋವಿಡ್ 19 ಹಿನ್ನೆಲೆ ಏಪ್ರಿಲ್, ಮೇ 2021ರ ತಿಂಗಳ ದರ ಪರಿಷ್ಕರಣೆ ಬಾಕಿ ದರವನ್ನು ಯಾವುದೇ ಬಡ್ಡಿ ವಿಧಿಸದೇ ಅಕ್ಟೋಬರ್, ನವೆಂಬರ್ 2021ರ ತಿಂಗಳಲ್ಲಿ ಕ್ರಮವಾಗಿ ವಸೂಲಿ ಮಾಡಲು ಆದೇಶಿಸಲಾಗಿದೆ.
ರಾಜ್ಯದಲ್ಲಿ ಉಪ ಚುನಾವಣೆ, ಪಂಚಾಯಿತಿಗಳ ಚುನಾವಣೆ ಹಾಗೂ ಕೊರೊನಾ ಹಿನ್ನೆಲೆ ದರ ಪರಿಷ್ಕರಣೆ ವಿಳಂಬವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಎಸ್ಕಾಂಗಳ ಪ್ರಸ್ತಾವನೆ | ಬೆಸ್ಕಾಂ, ಮೆಸ್ಕಾಂ, ಸೆಸ್ಕ್, ಹೆಸ್ಕಾಂ, ಜೆಸ್ಕಾಂಗಳು ಪ್ರತಿ ಯೂನಿಟ್ ಗೆ 83 ಪೈಸೆಗಳಿಂದ 1.68 ರೂಪಾಯಿವರೆಗೆ ದರ ಏರಿಕೆ ಮಾಡುವಂತೆ ಕೋರಲಾಗಿತ್ತು. ಇದನ್ನು ಪರಿಶೀಲಿಸಿ, ಎಲ್ಲ ಎಸ್ಕಾಂಗಳಿಗೆ ಅನ್ವಯವಾಗುವಂತೆ 30 ಪೈಸೆ ಹೆಚ್ಚಳ ಮಾಡಲಾಗಿದೆ.
https://www.suddikanaja.com/2021/05/30/good-news-by-shimul/