ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಅನ್ನು ಖೇಲೋ ಇಂಡಿಯಾಗೆ ನೀಡಿದ್ದಲ್ಲಿ ಸುಮ್ಮನಿರುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಭೆ ಕರೆದಾಗಲೇ ಸಹ್ಯಾದ್ರಿ ಕ್ಯಾಂಪಸ್ ಕುರಿತಾದ ಮಾಹಿತಿಗಳನ್ನು ನೀಡಲಾಗಿದೆ. ಇಷ್ಟಾದರೂ 18 ಎಕರೆ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಪತ್ರವನ್ನು ಬರೆಯಲಾಗಿದೆ ಎಂದು ಆರೋಪಿಸಿದರು.
ಅಷ್ಟು ಮಾತ್ರವಲ್ಲದೇ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಅನುಮೋದನೆ ನೀಡಿರುವುದಾಗಿಯೂ ಅನುಮಾನವಿದೆ. ಈ ವಿಚಾರದ ಬಗ್ಗೆ ಮಾಹಿತಿ ಕೇಳಿದರೂ ಯಾರೂ ಉತ್ತರಿಸುತ್ತಿಲ್ಲ. ಕೆಲವೊಮ್ಮೆ 18 ಎಕರೆ ಹಾಗೂ ಮತ್ತೊಂದು ಸಲ 28 ಎಕರೆ ಎನ್ನಲಾಗುತ್ತಿದೆ ಎಂದು ಆರೋಪಿಸಿದರು.
ಸಹ್ಯಾದ್ರಿ ಕ್ಯಾಂಪಸ್ ಉಳಿಸಿಕೊಳ್ಳುವುದಕ್ಕಾಗಿ ನಿರಂತರ ಹೋರಾಟ ಮಾಡಲಾಗುವುದು. ಯಾವ ಕಾರಣಕ್ಕೂ ಮತ್ತೊಂದು ಚಟುವಟಿಕೆ ಇದನ್ನು ನೀಡುವುದಿಲ್ಲ ಎಂದು ಎಚ್ಚರಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಗುರುಮೂರ್ತಿ, ಸಣ್ಣರಾಮ, ಕೆ.ಪಿ.ಶ್ರೀಪಾಲ್, ವಿಧಾತ್ರಿ,ವಿದ್ಯಾರ್ಥಿಗಳಾದ ವಿನಯ್ ಕಳಸ, ಅಭಿನಂದನ್, ಯೋಗೇಶ್, ಅಭಿಗೌಡ, ಅಭಿಲಾಷ್, ಸಾಗರ್ ವಿರಾಜ್, ಅಭಿನಂದನ್, ಸಿ.ಎಂ.ವಿಜಯ್ ಉಪಸ್ಥಿತರಿದ್ದರು.
ಸಹ್ಯಾದ್ರಿ ಕಾಲೇಜು ರಕ್ಷಣೆಗೆ ನಿಂತ ಹಳೆಯ ವಿದ್ಯಾರ್ಥಿಗಳು, ಜಿಲ್ಲಾಡಳಿತದ ವಿರುದ್ಧ ಆಕ್ರೋಶ