ಸುದ್ದಿ ಕಣಜ.ಕಾಂ
ಹೊಸನಗರ: ಮೈಸೂರು- ತಾಳಗುಪ್ಪ ರೈಲನ್ನು ರಿಪ್ಪನ್ ಪೇಟೆ ಸಮೀಪದ ಕೆಂಚನಾಲದಲ್ಲಿ ನಿಲುಗಡೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
https://www.suddikanaja.com/2021/02/10/railway-parcel-service-from-talaguppa-railway-station/
ಈ ಬಗ್ಗೆ ಮಾಜಿ ಶಾಸಕ ಬಿ.ಸ್ವಾಮಿರಾವ್, ತಾಲೂಕು ಪಂಚಾಯಿತಿ ಮಾಹಿ ಅಧ್ಯಕ್ಷ ಆಲುವಳ್ಳಿ ವಿರೇಶ್ ಮಾಧ್ಯಮಗೋಷ್ಠಿ ಕರೆದು ಒತ್ತಾಯಿಸಿದ್ದಾರೆ.
ಕೆಂಚನಾಲದಲ್ಲಿ ಈ ಹಿಂದೆ ರೈಲನ್ನು ನಿಲುಗಡೆ ಮಾಡಲಾಗುತಿತ್ತು. ಆದರೆ, ಕೊರೊನೋತ್ತರ ಬೆಳವಣಿಗೆಯಲ್ಲಿ ನಿಲುಗಡೆ ಮಾಡಲಾಗುತ್ತಿಲ್ಲ ಎಂದು ತಿಳಿಸಿದರು.
READ | ಇದ್ದ ಗಂಡು ಮಕ್ಕಳನ್ನು ಕಳೆದುಕೊಂಡ ತಾತನ ಅಂತ್ಯಕ್ರಿಯೆ ಮಾಡಿದ ಮೊಮ್ಮಗಳು!
ಮಾರಿಕಾಂಬ ದೇವಸ್ಥಾನಕ್ಕೆ ಭಕ್ತರ ಭೇಟಿ | ಕೆಂಚನಾಲ ಮಾರಿಕಾಂಬ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜತೆಗೆ, ಕೆಂದಲಗುಡ್ಡೆಯಲ್ಲಿ ಮೊರಾರ್ಜಿ ವಸತಿ ಶಾಲೆ, ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರವಿದೆ. ಬಸ್ ವ್ಯವಸ್ಥೆ ಇಲ್ಲದ್ದರಿಂದ ರೈಲು ನಿಲುಗಡೆ ಮಾಡಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ಹೇಳಿದರು.
ನಿಲುಗಡೆ ಮಾಡದಿದ್ದರೆ ಹೋರಾಟದ ಎಚ್ಚರಿಕೆ | ಜುಲೈ 12ರೊಳಗೆ ರೈಲು ನಿಲುಗಡೆ ಮಾಡದಿದ್ದರೆ ಸರ್ವ ಪಕ್ಷದಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್, ಆರ್.ಎನ್.ಮಂಜುನಾಥ್, ಬಿಜೆಪಿ ಮುಖಂಡ ನಾಗಾರ್ಜುನ್, ಕಲ್ಯಾಣಪ್ಪಗೌಡ, ಉಬೇದ್ ಉಪಸ್ಥಿತರಿದ್ದರು.
https://www.suddikanaja.com/2021/06/22/talguppa-mysuru-train-service-start/