ಸುದ್ದಿ ಕಣಜ.ಕಾಂ
ಭದ್ರಾವತಿ: ಇದ್ದ ಇಬ್ಬರು ಗಂಡು ಮಕ್ಕಳು ಮೃತಪಟ್ಟ ಹಿನ್ನೆಲೆ ತಾತನ ಅಂತ್ಯಸಂಸ್ಕಾರವನ್ನು ಮೊಮ್ಮಗಳು ನೆರವೇರಿಸಿದ ಘಟನೆ ತಾಲೂಕಿನ ಅಂತರಗಂಗೆ ಬಳಿಯ ಬಸವನಗುಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.
104 ವರ್ಷದ ನಂಜುಂಡಪ್ಪ ಎಂಬಾತ ವಯೋಸಹಜವಾಗಿ ಮೃತಪಟ್ಟಿದ್ದಾರೆ. ಆದರೆ, ಈತನ ಅಂತ್ಯಸಂಸ್ಕಾರಕ್ಕೆ ಗಂಡು ಮಕ್ಕಳು ಬಾರದ ಕಾರಣದಿಂದಾಗಿ ಮಗನ ಮಗಳು (ಮೊಮ್ಮಗಳು) ಅಶ್ವಿನಿ ನೆರವೇರಿಸಿದ್ದಾಳೆ. ನಂಜುಂಡಪ್ಪನ ಮಗನು ಮೃತಪಟ್ಟ ಬಳಿಕ ಆತನ ಮಗಳನ್ನು ಈತನೇ ಸಾಕಿದ್ದ.