ಸುದ್ದಿ ಕಣಜ.ಕಾಂ
ಬೆಂಗಳೂರು: ಇತ್ತೀಚೆಗೆ ನಿರ್ದೇಶಕಿ ರೂಪಾ ಅಯ್ಯರ್ ಸೇರಿದಂತೆ ಹಲವರ ಮೇಲೆ ಆರೋಪಗಳ ಸುರಿಮಳೆಯನ್ನೇ ಗೆರೆದಿದ್ದ ನಿರ್ದೇಶಕ ಟೇಶಿ ವೆಂಕಟೇಶ್ ವಿರುದ್ಧ ನಿರ್ದೇಶಕರು ಸಿಡಿಮಿಡಿಗೊಂಡಿದ್ದಾರೆ. ಈ ಮೂಲಕ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಆರೋಪ ಪ್ರತ್ಯಾರೋಪ ಶುರುವಾಗಿದೆ.
READ | ಒಬಿಸಿ ಘೋಷಿಸುವ ಅಧಿಕಾರ ರಾಜ್ಯಗಳಿಗಿಲ್ಲ
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ನಾಗೇಂದ್ರ ಅರಸ್, ರೂಪಾ ಅಯ್ಯರ್, ಮಳವಳ್ಳಿ ಸಾಯಿಕೃಷ್ಣ, ನಾಗೇಂದ್ರ ಅರಸ್, ಸುನೀಲ್ ಪುರಾಣಿಕ್ ಮೇಲೆ ಆರೋಪಗಳು ನಿರಾಧಾರ ಎಂದು ಹೇಳಿದರು.
‘ಸರ್ಕಾರ ನಿರ್ದೇಶಕರಿಗೆ ಏನೂ ನೀಡಿಲ್ಲ ಎಂದು ಟೇಶಿ ವೆಂಕಟೇಶ್ ಹೇಳಿದ್ದಾರೆ. ಆದರೆ, ಕಳೆದ ವರ್ಷ ಮೂರು ಸಾವಿರ ರೂಪಾಯಿಯ ರಿಲಯನ್ಸ್ ಕೋಪನ್ ಗಳನ್ನು ಚಲನಚಿತ್ರ ಅಕಾಡೆಮಿಯಿಂದ ನೀಡಲಾಗಿದೆ. 950 ಸದಸ್ಯರು ಇದರ ಸೌಲಭ್ಯ ಪಡೆದಿದ್ದಾರೆ ಎಂದು ತಿಳಿಸಿದರು.
READ | ಬಂಗಾರಪ್ಪ, ಯಡಿಯೂರಪ್ಪ ಅವರ ಆಪ್ತರಾಗಿದ್ದ ಈಸೂರು ಬಸವರಾಜ್ ಇನ್ನಿಲ್ಲ
ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಸಹಾಯ | ಅಯ್ಯರ್ ಅವರು ಕೋವಿಡ್ ಸಂಕಷ್ಟ ಸ್ಥಿತಿಯಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಸರ್ಕಾರದ ಜೊತೆ ಸಂಪರ್ಕ ಸಾಧಿಸಿದ ಅವರು ಲಸಿಕೆ ಕೊಡಿಸುವುದು, ಆಹಾರ ಕಿಟ್ ವಿತರಣೆ, ಆರೋಗ್ಯ ದೃಷ್ಟಿಯಿಂದ ಆಯುಷ್ಮಾನ್ ಕಾರ್ಡ್ ಸೌಲಭ್ಯ ಹೀಗೆ ಹತ್ತು ಹಲಚು ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ಜೆ.ಜೆ.ಶ್ರೀನಿವಾಸ್ ಮಾತನಾಡಿ, ಸಿನಿಮಾ ಹಕ್ಕುಗಳ ವಿಚಾರದಲ್ಲಿ ಟೇಶಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
https://www.suddikanaja.com/2020/11/25/ban-on-china-apps/