ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅರ್ಹತೆ ಇದ್ದರೂ ಯುವಪೀಳಿಗೆಗೆ ಉದ್ಯೋಗವಿಲ್ಲ. ಕ್ರಿಯಾಶೀಲರಾಗಿದ್ದರೂ ದುಡಿಯಲು ಅವಕಾಶ ಸಿಗುತ್ತಿಲ್ಲ. ಹೀಗಿರುವಾಗ, ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯಲ್ಲಿ ನಿವೃತ್ತ ನೌಕರರಿಗೆ ಲಕ್ಷಾಂತರ ಸಂಬಳ ಕೊಟ್ಟು ಕೆಲ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಗಂಭೀರ ಆರೋಪ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಂಗಳ ಅಂತ್ಯಕ್ಕೆ ಇಬ್ಬರು ಅಧಿಕಾರಿಗಳು ನಿವೃತ್ತರಾಗಲಿದ್ದಾರೆ. ಆದರೆ, ಇವರನ್ನು ಈಗ ನಿರ್ವಹಿಸುತ್ತಿರುವ ಹುದ್ದೆಗಳಲ್ಲಿ ಮುಂದುವರಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಆರೋಪಿಸಿದರು.
ಕೇಸ್ 1 | ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರತವಹಿಸುವ ವ್ಯಕ್ತಿಯೊಬ್ಬರು 1,30,000 ರೂಪಾಯಿ ವೇತನ ಪಡೆಯುತ್ತಿದ್ದಾರೆ. ಈ ತಿಂಗಳ ಅಂತ್ಯದ ನಂತರ ಇವರು ಪಿಂಚಣಿ 60 ಸಾವಿರ ರೂ. ಸ್ಮಾರ್ಟ್ ಸಿಟಿಯಿಂದ 70 ಸಾವಿರ ರೂ. ಸೇರಿ ಒಟ್ಟು 1.30 ಲಕ್ಷ ರೂ. ವೇತನ ಪಡೆಯಲಿದ್ದಾರೆ ಎಂದು ಹೇಳಿದರು.
READ | ಗಾಂಜಾ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬೇಧಿಸಿದ ಖಾಕಿ, ಕೆಜಿಗಟ್ಟಲೇ ಸಿಕ್ತು ಮಾದಕ ವಸ್ತು
ಕೇಸ್ 2 | ಆಡಿಟ್ ಆಫೀಸರ್ ಆಗಿಕಾರ್ಯನುರ್ವಹಿಸುತ್ತಿರುವ ಮತ್ತೊಬ್ಬರು 72,000 ರೂ. ವೇತನ ಪಡೆಯುತ್ತಿದ್ದಾರೆ. ನಿವೃತ್ತಿ ನಂತರ ಪಿಂಚಣಿ 40 ಸಾವಿರ ರೂ. ಸ್ಮಾರ್ಟ್ ಸಿಟಿಯಿಂದ 51,000 ರೂ. ಸೇರಿ ಒಟ್ಟು 61 ಸಾವಿರ ರೂ. ವೇತನ ಪಡೆಯಲಿದ್ದಾರೆ ಎಂದು ಯೋಗೇಶ್ ವಿವರಿಸಿದರು.
ನಿಯಮವೇನು ಹೇಳುತ್ತೆ | ನಿಯಮದ ಪ್ರಕಾರ ಇವರು ಸೇವೆಯಲ್ಲಿರುವಾಗ ಪಡೆಯುವ ವೇತನಕ್ಕಿಂತ ಈಗ ಪಡೆಯುವ ವೇತನ ಹೆಚ್ಚಾಗಬಾರದು. ಈ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆಯಲ್ಲಿ ಮೂವರು ಅಧಿಕಾರಿಗಳನ್ನು ಮರು ನೇಮಕ ಮಾಡಲಾಗಿದೆ. ಅದರ ಬದಲು ಯುವಕರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಆಕಾಂಕ್ಷಿಗಳಾದ ಭೂಮಿಕಾ, ನಿಹಾರಿಕಾ, ಆದಿತ್ಯ, ಅನೂಪ್, ಪೂಜಾ ಉಪಸ್ಥಿತರಿದ್ದರು.
ವೃದ್ಧಾಪ್ಯ ವೇತನ ಕೊಂಡೊಯ್ಯುವಾಗ ವೃದ್ಧೆಯ ಮೇಲೆ ಅಟ್ಯಾಕ್, ಟ್ರೀನ್ಮೆಂಟ್ ಫಲಕಾರಿಯಾಗದೇ ಸಾವು