ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹೊಸ ಸಿಲಿಂಡರ್ ಜೋಡಿಸುವಾಗ ಗ್ಯಾಸ್ ಲೀಕ್ ಆಗಿ ಬೆಂಕಿ ತಾಕಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಸಿಲಿಂಡರ್ ಗೆ ಬೆಂಕಿ ತಾಕಿದಾಗ ಅಗ್ನಿಶಾಮಕ ಸಿಬ್ಬಂದಿ ಹೇಗೆ ನಂದಿಸಿದರು ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕೋಟೆ ರಸ್ತೆಯಲ್ಲಿ ವೆಂಕಟಕೃಷ್ಣ ಜೋಯಿಸ್ ಎನ್ನುವವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ತಾಕಿ ಸ್ವಲ್ಪ ಹೊತ್ತು ಆತಂಕ ಮನೆ ಮಾಡಿತ್ತು.
ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ಆರ್.ಅಶೋಕ ಕುಮಾರ್, ಠಾಣಾಧಿಕಾರಿ ಕೆ.ಎನ್. ಪ್ರವೀಣ್, ಹುಲಿಯಪ್ಪ, ವೆಂಕಟೇಶ್, ಮಂಜುನಾಥ್, ಶಿವಶಂಕರ್ ಕಾರ್ಯಾಚರಣೆ ನಡೆಸಿ ಸಿಲಿಂಡರ್ ಗೆ ತಾಕಿದ್ದ ಬೆಂಕಿಯನ್ನು ನೊಂದಿಸಿದ್ದಾರೆ.