ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದಿರುವ ಸಾರ್ವಜನಿಕರು ಮುಂದುವರಿದು ಮತದಾನ ಬಹಿಷ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.
ಮೆಗ್ಗಾನ್ ಶವಾಗಾರದ ಬಳಿ ಆಂಬ್ಯುಲೆನ್ಸ್ ದಾದಾಗಿರಿ!, ಕೋವಿಡ್ ವಾರ್ಡ್ ನಲ್ಲಿ ನೋ ಎಂಟ್ರಿ
ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ನೆಟ್ವರ್ಕ್ ವಿಷಯ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಕರೂರು ಬಾರಂಗಿ ಹೋಬಳಿಯ ಕಾರಣಿ, ಕಟ್ಟಿನಕಾರು ಗ್ರಾಮಗಳಲ್ಲಿ ಈಗಾಗಲೇ ‘ನೋ ನೆಟ್ವರ್ಕ್, ನೋ ವೋಟಿಂಗ್’ ಅಭಿಯಾನ ಆರಂಭವಾಗಿದೆ.
ಸೋಶಿಯಲ್ ಮೀಡಿಯಾದಲ್ಲೂ ಈ ವಿಷಯ ಭಾರಿ ಸದ್ದು ಮಾಡುತ್ತಿದೆ. ಆನ್ಲೈನ್ ತರಗತಿಗಳು ಆರಂಭವಾದಾಗ ವಿದ್ಯಾರ್ಥಿಗಳು ಶಾಸಕರಿಗೆ ಭೇಟಿ ಮಾಡಿ ಈ ಬಗ್ಗೆ ಗಮನ ಕೂಡ ಸೆಳೆದಿದ್ದರು. ಆದರೂ ಸಮಸ್ಯೆಗೆ ಪರಿಹಾರ ಮಾತ್ರ ಇದುವರೆಗೆ ಸಿಕ್ಕಿಲ್ಲ.
2 ಸಾವಿರ ಮತದಾರರು | ಕಟ್ಟಿನಕಾರು ಕಾರಣಿ ನೆಟ್ವರ್ಕ್ ಹೋರಾಟ ಸಮಿತಿಯು `ನೋ ನೆಟ್ವರ್ಕ್ ನೋ ವೋಟಿಂಗ್’ ಅಭಿಯಾನಕ್ಕೆ ಚಾಲನೆ ನೀಡಿದ್ದು, ಕರೂರು ಹೋಬಳಿಯ ಹಾಳಸಸಿ, ಹೊಸಮನೆ, ಕಾರಣಿ, ಕಟ್ಟಿನಕಾರು ಗ್ರಾಮ ಮತ್ತಿತರ ಗ್ರಾಮಗಳಲ್ಲಿ 2 ಸಾವಿರಕ್ಕೂ ಹೆಚ್ಚು ಮತದಾರರಿದ್ದಾರೆ. ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ.
TECHNOLOGY | ಶೀಘ್ರವೇ Internet ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ, ಬ್ರಾಡ್ ಬ್ಯಾಂಡ್ ಸಮಿತಿ ರಚನೆ