ಸುದ್ದಿ ಕಣಜ.ಕಾಂ
ಸಾಗರ: ಮನೆಯ ಬೀಗ ಒಡೆದು ನಗದು, ಚಿನ್ನಾಭರಣ ಕಳವು ಮಾಡಲಾಗಿದೆ.
ಶಿವಪ್ಪ ನಾಯಕ ನಗರದ ಉಮಾಪತಿ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕಿನ ಕೊಲ್ಲುಣಸಿ ಗ್ರಾಮದ ಸಂಬಂಧಿಕರ ಮನೆಗೆ ಹೋದಾಗ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮನೆಯ ಬೀಗ ಮುರಿದು 200 ಬೆಳ್ಳಿ ಆರತಿ ತಟ್ಟೆ, ಬೆಳ್ಳಿ ಕಾಲು ಚೈನು, ಬೆಳ್ಳಿ ಲೋಟ ಸೇರಿ ಆಭರಣಗಳನ್ನು ಕಳವು ಮಾಡಲಾಗಿದೆ. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.