ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಪ್ರತಿ ದಿನ ಟ್ರಾಫಿಕ್ ಜಾಮ್ ಆಗುವ ಕೆಲವು ವೃತ್ತಗಳಲ್ಲಿ ಗುರುವಾರದಿಂದ ಬದಲಾವಣೆಗಳನ್ನು ಮಾಡಲಾಗಿದೆ.
ಶಿವಮೊಗ್ಗದಲ್ಲಿ ನಡೀತು ಹೈರಿಸ್ಕ್ ಓಪನ್ ಹಾರ್ಟ್ ಸರ್ಜರಿ, ಯಾರ್ಯಾರಿಗೆ ಗೊತ್ತಾ?
ಬಹುಮುಖ್ಯವಾಗಿ ಅಮೀರ್ ಅಹ್ಮದ್ ವೃತ್ತ, ಗೋಪಿ ವೃತ್ತದಲ್ಲಿ ವಾಹನ ಸಂಚಾರದಲ್ಲಿ ಪೊಲೀಸ್ ಇಲಾಖೆ ಕೆಲವು ಬದಲಾವಣೆಗೆ ಮಾಡಿದೆ.
ನೆಹರು ರಸ್ತೆಯಿಂದ ಓಟಿ ರಸ್ತೆ, ಬಸ್ ನಿಲ್ದಾಣದ ಕಡೆಗೆ ಹೋಗುವ ವಾಹನಗಳು ಈ ಮುಂಚೆ ವೃತ್ತಕ್ಕೆ ಸುತ್ತ ಹಾಕಿ ಹೋಗುತ್ತಿದ್ದವು. ಆದರೆ, ಅದನ್ನು ಬದಲಾವಣೆ ಮಾಡಲಾಗಿದೆ. ನೆಹರು ರಸ್ತೆಯಿಂದ ಬರುವ ವಾಹನಗಳು ಶಿವಪ್ಪ ನಾಯಕ ವೃತ್ತದಿಂದ ಬರಬೇಕು. ಕಾರಣ ಮಧ್ಯದ ರಸ್ತೆಯನ್ನು ಬ್ಯಾರಿಕೆಡ್ ಗಳಿಂದ ಬಂದ್ ಮಾಡಲಾಗಿದೆ.
ಪ್ರತಿ ದಿನ ವಾಹನಗಳ ಸಂಚಾರ ಸುಲಭವಾಗಿ ಆಗದೇ ಬಿಎಚ್ ರಸ್ತೆ, ನೆಹರು ರಸ್ತೆ ಹಾಗೂ ಒಟಿ ರಸ್ತೆಗೆ ಹೋಗುವಲ್ಲಿ ಸಂಚಾರ ದಟ್ಟಣೆ ಉಂಟಾಗುತಿತ್ತು. ಸಂಚಾರ ಪೊಲೀಸರಿಗೆ ಇದನ್ನು ಸರಿಪಡಿಸುವುದೇ ದೊಡ್ಡ ಸವಾಲಾಗಿ ಮಾರ್ಪಟ್ಟಿತ್ತು. ಈ ಕಾರಣಕ್ಕಾಗಿ ಹೊಸ ಪ್ರಯತ್ನಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಒಂದುವೇಳೆ, ಇದು ಫಲಪ್ರದಾದರೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಗೋಪಿ ವೃತ್ತದಲ್ಲಂತೂ ಯಾವ ವಾಹನಗಳು ಯಾವ ಕಡೆಯಿಂದ ಬರುತ್ತವೆ ಎನ್ನುವುದೇ ತಲೆನೋವು. ಬಂದರೂ ಎಲ್ಲಿಂದ ಹೋಗಬೇಕೆಂಬ ಗೊಂದಲ ವಾಹನ ಸವಾರರಲ್ಲಿ ಮೂಡುತ್ತಿತ್ತು. ಇದನ್ನು ಮನಗಂಡು ಬಾಲ್ ರಾಜ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬ್ಯಾರಿಕೆಡ್ ಹಾಕಿ ಕೆಲವು ಬದಲಾವಣೆ ಮಾಡಲಾಗಿತ್ತು. ಆದರೆ, ನಿರಂತರವಾಗಿ ಅಲ್ಲಿ ಸಿಬ್ಬಂದಿ ಗಸ್ತಿನಲ್ಲಿ ಇಲ್ಲದೇ ಇರುವುದರಿಂದ ಪರಿಸ್ಥಿತಿ ಯಥಾ ಸ್ಥಿತಿ ಮುಂದುವರಿದಿದೆ.
ಬದಲಾವಣೆಯೊಂದಿಗೆ ಮತ್ತೊಂದು ಚಾಲೆಂಜ್ | ಅಮೀರ್ ಅಹ್ಮದ್ ವೃತ್ತದಲ್ಲಿ ಟ್ರಾಫಿಕ್ ನಿರ್ವಹಣೆ ಮಾಡುವುದಕ್ಕಾಗಿ ಹೊಸ ಹೆಜ್ಜೆಯೇನೋ ಇಡಲಾಗಿದೆ. ಆದರೆ, ಬಸ್ ನಿಲ್ದಾಣದಿಂದ ಬಿ.ಎಚ್.ರಸ್ತೆ ಮಾರ್ಗವಾಗಿ ಬರುವ ದೊಡ್ಡ ವಾಹನಗಳು ಸರಳವಾಗಿ ಚಲಿಸಲು ಈಗಲೂ ಸಾಧ್ಯವಿಲ್ಲ. ಹೀಗಾಗಿ, ಸಮಸ್ಯೆ ಬಗೆಹರಿಯುವ ಸಾಧ್ಯತೆ ಕಡಿಮೆ.
ಐಟಿಐ ಪರೀಕ್ಷೆಗೆ ಮೇಜರ್ ಸರ್ಜರಿ, ಪರೀಕ್ಷಾ ಪ್ರಾಧಿಕಾರ ನಡೆಸಲಿದೆ ಪರೀಕ್ಷೆ, ಕಾರಣವೇನು?